IMG_20260111_225746.jpg
Spread the love

ದಿನಾಂಕ:11-01-2026(ಹಾಯ್ ಉಡುಪಿ ನ್ಯೂಸ್)

ತುಳುನಾಡಿನ ಮಣ್ಣಿನ ಸಂಸ್ಕೃತಿ ಮತ್ತು ನಂಬಿಕೆಯ ಪರಮೋಚ್ಚ ಶಕ್ತಿಯಾದ ದೈವಾರಾಧನೆಯು ಇಂದು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಈ ಪವಿತ್ರ ಕ್ಷೇತ್ರದಲ್ಲಿ ದೈವದರ್ಶನ ಪಾತ್ರಿಯಾಗಿ ಸುದೀರ್ಘ ಕಾಲದಿಂದ ಶ್ರದ್ಧೆ ಮತ್ತು ಭಕ್ತಿಯಿಂದ ಸೇವೆ ಸಲ್ಲಿಸುತ್ತಾ ಬಂದಿರುವ ಚೇರ್ಕಾಡಿ ಹೊಸಗರಡಿಯ ಹೆಮ್ಮೆಯ ಸಾಧಕ ಶ್ರೀ ಶಶಿಧರ್ ಪೂಜಾರಿ ಅವರಿಗೆ  ಪ್ರತಿಷ್ಠಿತ “ಭಾರತರತ್ನ ಮಾಜಿ ರಾಷ್ಟ್ರಪತಿ ಡಾ. ಎ. ಪಿ. ಜೆ. ಅಬ್ದುಲ್ ಕಲಾಂ ರಾಷ್ಟ್ರೀಯ ಪ್ರಶಸ್ತಿ” ಪ್ರದಾನ ಮಾಡಿ ಗೌರವಿಸಲಾಗಿದೆ.

ಇದು ಕೇವಲ ಒಬ್ಬ ವ್ಯಕ್ತಿಗೆ ಸಂದ ಗೌರವವಲ್ಲ, ಬದಲಾಗಿ ತುಳುನಾಡಿನ ದೈವಾರಾಧನೆ ಎಂಬ ಅದ್ಭುತ ಪರಂಪರೆಗೆ ಸಂದ ಮನ್ನಣೆಯಾಗಿದೆ. ಬೆಂಗಳೂರಿನ ಸಾಗರಸಂಗಮ ಲಲಿತ ಕಲೆಗಳ ತರಬೇತಿ ಅಕಾಡೆಮಿಯ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಸಂಭ್ರಮಾಚರಣೆಯಲ್ಲಿ ಈ ಪ್ರಶಸ್ತಿಯನ್ನು ಹಸ್ತಾಂತರಿಸಲಾಯಿತು. ಈ ಸಮಾರಂಭವು ಖ್ಯಾತ ಗಾಯಕರಾದ ಡಾ. ಶಶಿಧರ್ ಕೋಟೆ, ಸಂಸ್ಥೆಯ ಮುಖ್ಯಸ್ಥರಾದ ಸುದರ್ಶನ್ ಎ. ವಿ. ಯಾದವ್ ಅಣ್ಣೆ ಗೌಡರು ಹಾಗೂ ರಾಜ್ಯ ಜೆಡಿಎಸ್ ಕಾರ್ಯದರ್ಶಿಗಳೂ ಸೇರಿದಂತೆ ಹಿರಿಯ ಗಣ್ಯರ ಸಮ್ಮುಖದಲ್ಲಿ ಅತ್ಯಂತ ವೈಭವದಿಂದ ನಡೆಯಿತು. ಶಶಿಧರ್ ಪೂಜಾರಿಯವರು ದೈವದರ್ಶನ ಪಾತ್ರಿಯಾಗಿ ತಮ್ಮ ಕ್ಷೇತ್ರದಲ್ಲಿ ತೋರಿದ ಅಪ್ರತಿಮ ಬದ್ಧತೆ ಮತ್ತು ನಿರಂತರ ಸಾಧನೆಯನ್ನು ಗುರುತಿಸಿ ಈ ಮಹೋನ್ನತ ಪ್ರಶಸ್ತಿಯನ್ನು ನೀಡಲಾಗಿದೆ.

error: No Copying!