
ಕೋಟ: ದಿನಾಂಕ: 21-07-2025(ಹಾಯ್ ಉಡುಪಿ ನ್ಯೂಸ್) ವಯೋವೃದ್ಧ ಮಹಿಳೆ ಓರ್ವರ ಆರೈಕೆ ಮಾಡಲು ಮನೆಯಲ್ಲೇ ತಂಗಿದ್ದ ಹೋಂ ನರ್ಸ್ ಓರ್ವಳು ಮನೆಯಲ್ಲಿದ್ದ ಎಂಟು ಲಕ್ಷ ಕ್ಕೂ ಹೆಚ್ಚಿನ ಮೌಲ್ಯದ ಚಿನ್ನಾಭರಣ ಕದ್ದು ಪರಾರಿ ಯಾಗಿದ್ದಳು ಎಂದು ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬ್ರಹ್ಮಾವರ ತಾಲೂಕು ಪಾಂಡೇಶ್ವರ ಗ್ರಾಮದ ನಿವಾಸಿ ಸಿಪ್ರಿಯನ್ ಡಿ ಅಲ್ಮೆಡಾ (62) ಎಂಬವರು ದುಬೈನಲ್ಲಿ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಅವರ ತಾಯಿ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರಿಂದ ಊರಿಗೆ ಮರಳಿರುತ್ತಾರೆ ಎಂದಿದ್ದಾರೆ . ಅವರನ್ನು ನೋಡಿಕೊಳ್ಳಲು ಎಜೆನ್ಸಿಯವರು ಹೋಂ ನರ್ಸ್ ಆಗಿ ಸಾಗರ ತಾಲೂಕಿನ ಚಾಮಗಾರ ಕೇರಿ ನಿವಾಸಿ ಶೀಲ ಎಂಬುವವರನ್ನು ಕಳುಹಿಸಿಕೊಟ್ಟಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಶೀಲಳು ತನ್ನ ಗಂಡ ಮಣಿ ಯಾನೆ ಲೋಹಿತ್ , ಮೈದುನ ಸಂತೋಷ್ ಮತ್ತು ಅತ್ತೆ (ಮಣಿಯ ತಾಯಿ) ಎಂಬವರನ್ನು ಪರಿಚಯಿಸಿ ಕೊಟ್ಟಿರುತ್ತಾಳೆ ಎಂದಿದ್ದಾರೆ. ಶೀಲಳು ಸುಮಾರು ದಿನಗಳ ಕಾಲ ಸಿಪ್ರಿಯನ್ ಡಿ ಅಲ್ಮೆಡಾ ಅವರ ಮನೆಯಲ್ಲಿ ಕೆಲಸ ಮಾಡಿ ದಿನಾಂಕ:27/05/2025 ರಂದು ಆಕೆಯ ಮಗನಿಗೆ ಆರೋಗ್ಯ ಸರಿಯಿಲ್ಲದ ಕಾರಣ ಹೇಳಿ ಊರಿಗೆ ಹೋಗುತ್ತೇನೆ ಎಂದು ತಿಳಿಸಿ ಊರಿಗೆ ಹೋಗಿರುತ್ತಾಳೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ದಿನಾಂಕ:28/05/2025 ರಂದು ಸಿಪ್ರಿಯನ್ ಡಿ ಅಲ್ಮೆಡಾ ಅವರು ತಾಯಿಯ ಚಾಕರಿ ಮಾಡಿ ಕೋಣೆಗೆ ಹೋಗಿ ಕಪಾಟಿನಲ್ಲಿ ಲಾಕರ್ ತೆಗೆದು ನೋಡಿದಾಗ ಡ್ರಾವರ್ ನಲ್ಲಿ ಇದ್ದ ಸುಮಾರು 5,00,000/- ಕ್ಕೂ ಹೆಚ್ಚು ಮೌಲ್ಯದ ಚಿನ್ನದ ಒಡವೆಗಳು , 87,000/- ಹಣ, 1,10,000/- ಚೂರಿ ಸೆಟ್ ಹಾಗೂ 78,000/- ಬೆಲೆ ಬಾಳುವ ಪಾತ್ರೆ ಸೆಟ್ ಗಳನ್ನು ಶೀಲಳು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ನಂತರ ಇದೇ ವಿಷಯದಲ್ಲಿ ಆರೋಪಿತರನ್ನು ಸಂಪರ್ಕಿಸಿ ಆನಂದಪುರ ಪೊಲೀಸ್ ಠಾಣೆಗೆ ಕರೆಯಿಸಿ ಮಾತುಕತೆ ನಡೆಸಿದಾಗ ಆರೋಪಿಗಳು ಕಳುವು ಮಾಡಿಕೊಂಡು ಹೋದ ಬಗ್ಗೆ ತಪ್ಪೊಪ್ಪಿಕೊಂಡಿದ್ದು ಅದರಲ್ಲಿ 1,30,000/- ಹಣದ ಬ್ರಾಸ್ಲೈಟ್ ಹಾಗೂ 40,000/- ಹಣವನ್ನು ವಾಪಾಸು ಸಿಪ್ರಿಯನ್ ಡಿ ಅಲ್ಮೆಡಾ ಅವರಿಗೆ ನೀಡಿದ್ದು ಉಳಿದ ಹಣ ಮತ್ತು ಒಡವೆಯನ್ನು ನಂತರದಲ್ಲಿ ಕೊಡುವುದಾಗಿ ತಿಳಿಸಿದ್ದು ಈವರೆಗೂ ಕೊಡದೇ ಇದ್ದಾರೆಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಕಲಂ: 306 ಜೊತೆಗೆ 3(5) BNS ನಂತೆ ಪ್ರಕರಣ ದಾಖಲಾಗಿದೆ.