ಮಂಗಳೂರು: ದಿನಾಂಕ:17-09-2026(ಹಾಯ್ ಉಡುಪಿ ನ್ಯೂಸ್)
ಮಂಗಳೂರಿನ ಸಚಿವ ಸಂಪುಟ ಸಭೆಯ ಪೂರ್ವಭಾವಿ ಔತಣಕೂಟದ ವೇಳೆ ಏರ್ಪಡಿಸಲಾಗಿದ್ದ ಕರಾವಳಿಯ ಸಾಂಸ್ಕೃತಿಕ ವಸ್ತುಪ್ರದರ್ಶನವನ್ನು ಮುಖ್ಯಮಂತ್ರಿ ಶ್ರೀ ಡಿಕೆ ಶಿವಕುಮಾರ್ ಅವರು ಕಣ್ತುಂಬಿಕೊಂಡರು.

ಸಾಂಪ್ರದಾಯಿಕ ವಾದ್ಯಗಳು, ಪುರಾತನ ಕೃಷಿ ಸಲಕರಣೆಗಳು, ದೈವಾರಾಧನೆ ಮತ್ತು ಕಂಬಳದ ಪರಿಕರಗಳು ಕಡಲತೀರದ ಜನಜೀವನ ಹಾಗೂ ಶ್ರೀಮಂತ ಪರಂಪರೆಯನ್ನು ಅತ್ಯಂತ ನೈಜವಾಗಿ ಅನಾವರಣಗೊಳಿಸಿದೆ, ವಿವಿಧ ಸಂಸ್ಕೃತಿಗಳ ನೆಲೆ ನಮ್ಮ ಕರಾವಳಿ ಎಂದು ಮುಖ್ಯಮಂತ್ರಿ ಶ್ರೀ ಡಿಕೆ ಶಿವಕುಮಾರ್ ಅವರು ಆ ಸಂದರ್ಭದಲ್ಲಿ ಹೇಳಿದರು.


