ಕೋಟ: ದಿನಾಂಕ 15.09.2026 (ಹಾಯ್ ಉಡುಪಿ ನ್ಯೂಸ್) ದೇವಸ್ಥಾನಕ್ಕೆ ಪೂಜೆಗೆ ತೆರಳಿದ್ದ ವ್ರಧ್ಧ ಮಹಿಳೆ ಯೋರ್ವರ ಕರಿಮಣಿ ಸರವನ್ನು ಯಾರೋ ಕಳ್ಳರು ಕದ್ದ ಘಟನೆ ಕೋಟದಲ್ಲಿ ನಡೆದಿದೆ. ಈ ಬಗ್ಗೆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.
ಬ್ರಹ್ಮಾವರ ಮಣೂರು ಗ್ರಾಮದ ನಿವಾಸಿ ಬೇಬಿ ಶೆಡ್ತಿ (72) ಎಂಬವರು ದಿನಾಂಕ:14-09-2026 ರಂದು ಕೋಟ ಶ್ರೀ ಅಮೃತೇಶ್ಚರಿ ದೇವಸ್ಥಾನಕ್ಕೆ ಮಧ್ಯಾಹ್ನ ಸುಮಾರು 12:15 ಘಂಟೆಗೆ ಹೋಗಿ ಪೂಜೆ ಕಾರ್ಯ ಮುಗಿಸಿ ಸುಮಾರು 12:30 ಘಂಟೆಗೆ ದೇವಸ್ಥಾನದ ಹೊರಗಡೆ ಬಂದು ನೋಡಿದಾಗ ಕುತ್ತಿಗೆಯಲ್ಲಿ ಇದ್ದ ಸುಮಾರು 24 ಗ್ರಾಂ ತೂಕದ ಕರಿಮಣಿ ಸರ ಇರಲಿಲ್ಲ. ಯಾರೋ ಕಳ್ಳರು ಮಧ್ಯಾಹ್ನ ಸುಮಾರು 12:15 ಘಂಟೆಯಿಂದ 12:30 ಘಂಟೆಯ ಮದ್ಯದ ಅವಧಿಯಲ್ಲಿ ದೇವಸ್ಥಾನದ ಒಳಗಡೆ ಬೇಬಿ ಶೆಡ್ತಿ ರವರ ಕುತ್ತಿಗೆಯಲ್ಲಿ ಇದ್ದ ಸುಮಾರು 3,00,000/- ರೂ ಮೌಲ್ಯದ 24 ಗ್ರಾಂ ತೂಕದ ಕರಿಮಣಿ ಸರವನ್ನು ಎಳೆದು ಸುಲಿಗೆ ಮಾಡಿಕೊಂಡು ಹೋಗಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 142/2026 ಕಲಂ: 304 BNS ರಂತೆ ಪ್ರಕರಣ ದಾಖಲಾಗಿದೆ.


