images-9.jpeg
Spread the love

ಪಡುಬಿದ್ರಿ: ದಿನಾಂಕ:22-07-2026 (ಹಾಯ್ ಉಡುಪಿ ನ್ಯೂಸ್) ಕಾಪು ತಾಲೂಕು ಬಡಾ ಗ್ರಾಮದ ಎರ್ಮಾಳು ಎಂಬಲ್ಲಿ ಗಾಂಜಾ ಗೋಲಿಗಳನ್ನು ಮಾರಾಟ ಮಾಡುತ್ತಿದ್ದ ಪಾನ್ ಸ್ಟಾಲ್ ಮಾಲೀಕನನ್ನು ಪಡುಬಿದ್ರಿ ಪೊಲೀಸ್ ಠಾಣೆಯ ಪಿಎಸ್ಐ ಸಕ್ತಿವೇಲು ಅವರು ಬಂಧಿಸಿದ್ದಾರೆ.

ಪಡುಬಿದ್ರಿ ಠಾಣಾ  ಪಿ.ಎಸ್‌.ಐ ಸಕ್ತಿವೇಲು ಅವರಿಗೆ  ದಿನಾಂಕ: 22.07.2026 ರಂದು ಬೆಳಿಗ್ಗೆ  ಬಂದ ಖಚಿತ ಮಾಹಿತಿ ಮೇರೆಗೆ ಪಡುಬಿದ್ರೆ ಪೊಲೀಸ್‌ ಠಾಣಾ ಸರಹದ್ದಿನ  ಕಾಫು ತಾಲೂಕು ಬಡಾ ಗ್ರಾಮದ ಎರ್ಮಾಳು ಎಂಬಲ್ಲಿ ಇರುವ ಅನೀಲ್ ಪಾನ್‌ ಸ್ಟಾಲ್‌ ನಲ್ಲಿ  ಪರವಾನಿಗೆ ಇಲ್ಲದೆ ಅಕ್ರಮವಾಗಿ  ನಿಷೇದಿತ ಮಾದಕ ವಸ್ತು ( ಗಾಂಜಾಗೋಲಿ ) ಗಳನ್ನು  ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಬಂದ ಮಾಹಿತಿಯಂತೆ ಕೂಡಲೇ ಸ್ಥಳಕ್ಕೆ  ದಾಳಿ ನಡೆಸಿ  ಅನಿಲ್‌ ಎಂಬಾತನನ್ನು ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ .

ಆತನ  ಅನೀಲ್ ಪಾನ್‌ ಸ್ಟಾಲ್‌ ಅಂಗಡಿಯನ್ನು  ಶೋಧನೆ ಮಾಡಿ ಪರಿಶೀಲಿಸಿದಾಗ ಅಂಗಡಿಯಲ್ಲಿ  ಆರೋಪಿ ಅನಿಲ್‌ ನು ಸಾರ್ವಜನಿಕರಿಗೆ ಮಾರಾಟ ಮಾಡಲು  ಇಟ್ಟಿದ್ದ  ಒಟ್ಟು ಸುಮಾರು 625.83 ಗ್ರಾಂ ತೂಕದ   ಅಂದಾಜು ಮೌಲ್ಯ  ರೂ 4000/ ಮೊತ್ತದ ಗಾಂಜಾಗೋಲಿಗಳನ್ನು ಹಾಗೂ  ಗಾಂಜಾಗೋಲಿಗಳನ್ನು ಮಾರಾಟ ಮಾಡಿ ಸಂಗ್ರಹಿಸಿದ  ನಗದು ರೂ 600/ ನ್ನು  ಸ್ವಾಧೀನಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ   ಕಲಂ 8 (c), 20(b)(II)(A) NDPS Act ರಂತೆ ಪ್ರಕರಣ ದಾಖಲಾಗಿದೆ.

error: No Copying!