unnamed-1.webp
Spread the love

ಕಾರ್ಕಳ: ದಿನಾಂಕ:15-04-2026(ಹಾಯ್ ಉಡುಪಿ ನ್ಯೂಸ್) ನಗರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಮುರಳೀಧರ ನಾಯ್ಕ್ ಅವರಿಗೆ ದಿನಾಂಕ:15-04-2026 ರಂದು ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ಶಂಕರಬೆಟ್ಟು  ಅರ್ಬಿಪಾದೆ ಎಂಬಲ್ಲಿರುವ ಸರ್ವೇ ನಂಬ್ರ 281 ರಲ್ಲಿರುವ  ಕಲ್ಲುಕೋರೆ ಪಾದೆಯಲ್ಲಿ  ಅಕ್ರಮ ಗಣಿಕಾರಿಕೆ ನಡೆಸುತ್ತಿರುವವರ ಬಗ್ಗೆ  ಸಾರ್ವಜನಿಕರಿಂದ ಬಂದ ಮಾಹಿತಿಯಂತೆ    ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ  ಶಂಕರಬೆಟ್ಟು  ಅರ್ಬಿಪಾದೆ ಎಂಬಲ್ಲಿರುವ ಸರಕಾರಿ ಸ್ಥಳದಲ್ಲಿರುವ ಕಲ್ಲು ಕೋರೆ  ಪ್ರದೇಶಕ್ಕೆ  ದಾಳಿ ನಡೆಸಿದ್ದಾರೆ .

ಪೊಲೀಸರು ದಾಳಿ ನಡೆಸಿ ಸ್ಥಳವನ್ನು ಪರಿಶೀಲಿಸಿದಾಗ  ಕಲ್ಲು  ಗಣಿಗಾರಿಕೆ ನಡೆಸುತ್ತಿರುವುದು  ಕಂಡು  ಬಂದಿದ್ದು,  ‌ಸ್ಥಳದಲ್ಲಿ  KA 19 B 7745 ನೇ ನಂಬ್ರದ ಟಿಪ್ಪರ್‌ ಲಾರಿ ಚಾಲಕ ಮತ್ತು KA 40 1801 ನೇ ಲಾರಿ ಚಾಲಕ ಸೇರಿಕೊಂಡು ಕಲ್ಲುಗಳನ್ನು ಕಳವು ಮಾಡಿ ಸಾಗಾಟ ಮಾಡಲು ಲೋಡ್ ಮಾಡುತ್ತಿದ್ದ ಚಾಲಕರನ್ನು ಬಂಧಿಸಿ ವಶಕ್ಕೆ ಪಡೆದು ಕಲ್ಲು ತೆಗೆಯಲು ಉಪಯೋಗಿಸಿದ  2 ಚಮ್ಮಡಿ, 1 ಕಬ್ಬಿಣದ ಹಾರೆ, 2 ಕಬ್ಬಿಣದ ಚಾಣ, 1 ಕಬ್ಬಿಣದ ಸರಳು  ಮತ್ತು ಸೈಜ್‌ ಕಲ್ಲುಗಳನ್ನು ಲೋಡ್‌ ಮಾಡಿದ KA 19 B 7745 ನಂಬ್ರದ  ಟಾಟಾ  ಕಂಪೆನಿಯ ಟಿಪ್ಪರ್  ಮತ್ತು KA 40 1801 ನಂಬ್ರದ ಖಾಲಿ ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ .

ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಆರೋಪಿತರಾದ  ಮನೋಜ್‌ ಮತ್ತು ಶರಣ್‌ ಎಂಬವರನ್ನು ಬಂಧಿಸಿದ್ದಾರೆ .ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಕಲಂ 303(2), 112(1) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!