IMG-20260226-WA0071.jpg
Spread the love

ದಿನಾಂಕ:26-02-2026(ಹಾಯ್ ಉಡುಪಿ ನ್ಯೂಸ್)

ರಿಯಾದ್: ಸೌದಿ ಅರೇಬಿಯಾದ ತೈಫ್ ಬಳಿಯ ಮಹ್ಲುಮಿಯಾದಲ್ಲಿ ಉಮ್ರಾ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್ ಅಪಘಾತಕ್ಕೀಡಾಗಿ ಇಬ್ಬರು ಕೇರಳಿಗರು ಸಾವನ್ನಪ್ಪಿದ್ದಾರೆ.

ರಿಯಾದ್‌ನ ಹೋತಾದಿಂದ ಮೆಕ್ಕಾಗೆ ಹೊರಟಿದ್ದ ಬಸ್ ಟೈರ್ ಸ್ಫೋಟಗೊಂಡು ಉರುಳಿಬಿದ್ದಿದೆ. ಮೃತರನ್ನು ಮಲಪ್ಪುರಂನ ನೀಲಂಬೂರು ಮೂಲದ ಇಸ್ಮಾಯಿಲ್ ಮತ್ತು ಕೊಲ್ಲಂನ ಪಠಾಣಪುರಂ ಮೂಲದ ಶೀಬಾ ಎಂದು ಗುರುತಿಸಲಾಗಿದೆ.

ಅಪಘಾತದಲ್ಲಿ ಸುಮಾರು ಇಪ್ಪತ್ತು ಮಲಯಾಳಿಗಳು ಗಾಯಗೊಂಡಿದ್ದಾರೆ. ಬಸ್‌ನಲ್ಲಿ ವಿವಿಧ ರಾಜ್ಯಗಳ ಅನೇಕ ಜನರು ಇದ್ದರು.

error: No Copying!