ಉಡುಪಿ: ದಿನಾಂಕ:23-12-2025(ಹಾಯ್ ಉಡುಪಿ ನ್ಯೂಸ್) ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಡಾಕ್ಟರ್ ಬಾಬಾ ಸಾಹೇಬ ಅಂಬೇಡ್ಕರ್ ಇವರು ದೇಶಕ್ಕೆ ಕೊಟ್ಟ ಸಂವಿಧಾನ ಹಾಗೂ ಅವಿತಿಟ್ಟ ನಿಜ ಘಟನೆಗಳ ಸ್ಪೋಟ ನಾಟಕವು ರಂಗಭೂಮಿ ಟ್ರಸ್ಟ್ (ರಿ )ಕೊಡಗು ಇವರ ಆಶ್ರಯದಲ್ಲಿ ಉಡುಪಿಯ ಓವೈಸಿ ಇನ್ಫೋಸಿಸ್ ವೇದಿಕೆಯಲ್ಲಿ ನಡೆಯಿತು.
ಕಾರ್ಯಕ್ರಮದ ಯಶಸ್ಸಿಗೆ ಶ್ರೀ ರಾಜೇಂದ್ರ ಪಂಧುಬೆಟ್ಟು ಶ್ರೀ ಸುಶಾಂತ ಬ್ರಹ್ಮಾವರ,ಶ್ರೀ ಭರತ ಕಾಡಬೆಟ್ಟು ಶ್ರೀಮತಿ ಭಾರತೀ ಚಂದ್ರಶೇಖರ,ಮಾಜಿ ನಗರ ಸಭಾ ಅಧ್ಯಕ್ಷರು ಶ್ರೀ ಪ್ರಭಾಕರ ಪೂಜಾರಿ ಶ್ರೀ ಬಾಲಕೃಷ್ಣ ಶೆಟ್ಟಿ ನಗರಸಭಾ ಸದಸ್ಯರು ,ಶ್ರೀ ಶಿವಕುಮಾರ್ ಕರ್ಜೆ ಹಾಗೂ ಹಿಂದುಳಿದ ಮೋರ್ಚಾ ಎಲ್ಲಾ ಪದಾಧಿಕಾರಿಗಳು ,ಎ .ಪಿ .ಎಂ .ಸಿ ವರ್ತಕರು ಸೇರಿ ನೂರಾರು ಜನಸೇರಿದ್ದು ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ.
