ಕಾಪು : ದಿನಾಂಕ :19-12-2025(ಹಾಯ್ ಉಡುಪಿ ನ್ಯೂಸ್) ದಂಡ ತೀರ್ಥ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಅಪರಾಧ ತಡೆ ಮಾಸಾಚರಣೆಯ ಅಂಗವಾಗಿ, ಕಾಪು ಪೊಲೀಸ್ ಠಾಣೆಯ ಎ.ಎಸ್.ಐ ಉಮೇಶ್ ನಾಯ್ಕರವರು ವಿದ್ಯಾರ್ಥಿಗಳಿಗೆ ಸಂಚಾರ ನಿಯಮಗಳು ಮತ್ತು ಕಾನೂನು ಪಾಲನೆ ಬಗ್ಗೆ ಅರಿವು ಹಾಗೂ ಮಕ್ಕಳ ಸುರಕ್ಷತೆ, ಸೈಬರ್ ಕ್ರೈಂ ಮತ್ತು ಸೈಬರ್ ಸಹಾಯವಾಣಿ 1930 , ತುರ್ತು ಸಹಾಯವಾಣಿ 112 ಬಗ್ಗೆ ಮಾಹಿತಿಯನ್ನು ನೀಡಿದರು.
