Spread the love

ಕುಂದಾಪುರ : ದಿನಾಂಕ :29-07-2025(ಹಾಯ್ ಉಡುಪಿ ನ್ಯೂಸ್) ಮೇಯಲು ಬಿಟ್ಟಿದ್ದ ದನಗಳನ್ನು ಯಾರೋ ವಧೆ ಮಾಡುವ ಉದ್ದೇಶದಿಂದ ಕಳ್ಳತನ ನಡೆಸಿದ್ದಾರೆ ಎಂದು ಕಾಳಾವರ ಗ್ರಾಮದ ನಿವಾಸಿ ಮನೋಹರ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.

ಕುಂದಾಪುರ ತಾಲೂಕಿನ ಕಾಳಾವರ ಗ್ರಾಮದ ನಿವಾಸಿ ಮನೋಹರ (33) ಎಂಬವರು  ದಿನಾಂಕ 27/07/2025 ರಂದು ಬೆಳಿಗ್ಗೆ ತಮ್ಮ ದನಗಳನ್ನು ಮೇಯಲು ಬಿಟ್ಟಿದ್ದು ನಂತರ 2 ದನಗಳು ಮನೆಗೆ ವಾಪಾಸು ಬಾರದೇ ಇದ್ದು ನಂತರ 1 ದನ ದಿನಾಂಕ 28/07/2025 ರಂದು ಬೆಳಿಗ್ಗೆ  ಮನೆಗೆ ವಾಪಾಸು ಬಂದಿದ್ದು ನಂತರ ಉಳಿದ 1 ದನವು ಬಾರದೇ ಇರುವುದನ್ನು ನೋಡಿ ಪರಿಸರದಲ್ಲಿ ಹಾಡಿಯಲ್ಲಿ ಎಷ್ಟು ಹುಡುಕಿದರು ಸಿಕ್ಕಿರುವುದಿಲ್ಲ. ನಂತರ  ಮನೋಹರ ಅವರು ಕಾಳಾವರ ಜಂಕ್ಷನ್ ನ ಅಭಿಮಾನ ಬಾರ್ ಬಳಿಯಲ್ಲಿರುವ ನಂದಿಕೇಶ್ವರ ಬೇಕರಿಯ ಸಿಸಿ ಟಿವಿ ಕ್ಯಾಮರಾವನ್ನು ಪರಿಶೀಲಿಸಿದಾಗ ಮನೋಹರ ರವರ ಮನೆಯ 2 ದನಗಳು ಬೇಕರಿಯ ಪಕ್ಕದಲ್ಲಿ ಮಲಗಿದ್ದು ದಿನಾಂಕ 28/07/2025 ರಂದು ಬೆಳಿಗ್ಗೆ 05:00 ಗಂಟೆ ಸುಮಾರಿಗೆ ಆ ದನಗಳಲ್ಲಿ 1 ದನವನ್ನು ಯಾರೋ 2 ಜನರು ಯಾವುದೋ ಆಹಾರವನ್ನು ದನಕ್ಕೆ ನೀಡಿ ದನದ ಕೊಂಬನ್ನು ಹಿಡಿದು ಗಟ್ಟಿಯಾಗಿ ಎಳೆದು ದನದ ಕೈ ಕಾಲುಗಳನ್ನು ಕಟ್ಟಿ ಹಾಕುತ್ತಿರುವುದು ಕಂಡು ಬಂತು .

ದನವನ್ನು 2 ಜನ ಆರೋಪಿಗಳು ವಧೇ ಮಾಡುವ ಉದ್ದೇಶದಿಂದ ಯಾವುದೋ ವಾಹನದಲ್ಲಿ ದನವನ್ನು ಹಿಂಸಾತ್ಮಕ ರೀತಿಯಲ್ಲಿ ಕಳವು ಮಾಡಿಕೊಂಡು ಹೋಗಿದ್ದಾರೆ .ಕಳವು ಮಾಡಿದ ದನವು ಕಂದು ಬಣ್ಣದ 5 ವರ್ಷದ ಪ್ರಾಯದ ದನವಾಗಿದ್ದು ಅದರ ಅಂದಾಜು ಮೌಲ್ಯ ಸುಮಾರು 5000/- ಆಗಿರುತ್ತದೆ ಎಂದು ಮನೋಹರ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ  ಕಲಂ: 303(2) BNS & 4,5, 12 Cow Slaughter Act & 11(1)(d) Cruelty Animal Act ರಂತೆ ಪ್ರಕರಣ ದಾಖಲಾಗಿದೆ.

error: No Copying!