Spread the love

ಕುಂದಾಪುರ: ದಿನಾಂಕ: 20-07-2025(ಹಾಯ್ ಉಡುಪಿ ನ್ಯೂಸ್) ಕಟ್ ಬೆಲ್ತೂರು ಗ್ರಾಮದ ಹರೆಗೋಡು ಕೆರೆಯ ಬದಿಯ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜುಗಾರಿ ಆಡುತ್ತಿದ್ದ ಸ್ಥಳಕ್ಕೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಯವರಾದ ಭೀಮಾ ಶಂಕರ ಸಿನ್ನೂರ ಸಂಗಣ್ಣ ಅವರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ.

ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್ಐ ಭೀಮಾ ಶಂಕರ ಸಿನ್ನೂರ ಸಂಗಣ್ಣ ಅವರಿಗೆ ದಿನಾಂಕ:19-07-2025 ರಂದು ಇಸ್ಪೀಟು ಜುಗಾರಿ ಆಟದ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಯವರೊಂದಿಗೆ  ಕುಂದಾಪುರ ತಾಲೂಕು ಕಟ್ ಬೆಲ್ತೂರು ಗ್ರಾಮದ ಹರೆಗೋಡು ಶ್ರೀ ನಂದಿಕೇಶ್ವರ ಸಹಪರಿವಾರ ದೈವಸ್ಥಾನದ ಹತ್ತಿರ ಕೆರೆಯ ಬದಿಯ ಖಾಲಿ ಜಾಗದಲ್ಲಿ ಕೆಲವು ವ್ಯಕ್ತಿಗಳು ಹಣವನ್ನು ಪಣವಾಗಿಟ್ಟು ತಮ್ಮ ಸ್ವಂತ ಲಾಭಕ್ಕಾಗಿ ಇಸ್ಪೀಟು ಎಲೆಗಳಿಂದ ಅಂದರ್ – ಬಾಹರ್ ಎಂಬ ಇಸ್ಪೀಟು ಆಟವಾಡುತ್ತಿದ್ದವರ ಮೇಲೆ  ದಾಳಿ ನಡೆಸಿದ್ದಾರೆ.

ಆಗ ಸ್ಥಳದಲ್ಲಿ ಇಸ್ಪೀಟ್‌ ಜುಗಾರಿ ಆಡುತ್ತಿದ್ದ 4 ಜನರನ್ನು ಬಂಧಿಸಿ ವಶಕ್ಕೆ ಪಡೆದಿದ್ದು ಇಬ್ಬರು ಓಡಿ ತಪ್ಪಿಸಿಕೊಂಡಿರುತ್ತಾರೆ ಎನ್ನಲಾಗಿದೆ . ಪೊಲೀಸರ ಕೈಗೆ ಸಿಕ್ಕ 4 ಜನರ  ಹೆಸರು ವಿಳಾಸ ವಿಚಾರಿಸಿದಾಗ 1) ಸಂಜೀವ, 2) ಚಂದ್ರ, 3) ಕೋಟಿ ಪೂಜಾರಿ, 4) ಸಂಪತ್  ಹಾಗೂ ಓಡಿ ಹೋದ 2 ಜನರ ಹೆಸರು ವಿಳಾಸ ವಿಚಾರಿಸಿದಾಗ 1) ಗಣೇಶ್‌ ಸುಳ್ಸೆ 2) ಮಂಜುನಾಥ ಎಂಬುವುದಾಗಿ ತಿಳಿಸಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಆರೋಪಿಗಳು ಇಸ್ಪೀಟ್‌ ಜುಗಾರಿ ಆಟಕ್ಕೆ ಬಳಸಿದ್ದ  ಪ್ಲಾಸ್ಟಿಕ್‌ ಶೀಟ್ ಮೇಲೆ ಇದ್ದ ಒಟ್ಟು 1,640/- ರೂಪಾಯಿ, 2) ನೀಲಿ ಬಣ್ಣದ ಪ್ಲಾಸ್ಟಿಕ್‌ -2, 3) 52 ಇಸ್ಪೀಟ್ ಎಲೆಗಳು, 4) ನೋಕಿಯಾ ಕಂಪೆನಿಯ ಕೀ-ಪ್ಯಾಡ್‌ ಮೊಬೈಲ್‌-01, 5) KA 20 EN 8303 ನಂಬ್ರದ ಹೀರೊ ಸ್ಪ್ಲೆಂಡರ್‌ ಮೋಟಾರು ಸೈಕಲ್‌ , 6) KA 20 MD 8950 ನಂಬ್ರದ Eeco ಕಾರನ್ನು ಮುಂದಿನ ಕಾನೂನು ಕ್ರಮದ ಬಗ್ಗೆ ಸ್ವಾಧೀನ  ಪಡಿಸಿಕೊಂಡಿದ್ದಾರೆ .

ಈ ಬಗ್ಗೆ ಕುಂದಾಪುರ ಗ್ರಾಮಾಂತರ  ಪೊಲೀಸ್‌ ಠಾಣೆಯಲ್ಲಿ  ಕಲಂ: 87 KP Act ನಂತೆ ಪ್ರಕರಣ ದಾಖಲಾಗಿದೆ.

error: No Copying!