Spread the love

ಬ್ರಹ್ಮಾವರ: ದಿನಾಂಕ:30-06-2025(ಹಾಯ್ ಉಡುಪಿ ನ್ಯೂಸ್) ಹೇರಾಡಿ ಗ್ರಾಮದ ರೈಲ್ವೇ ಸ್ಟೇಷನ್ ಬಳಿಯ ರಶ್ಮಿ ಬೀಡಾ ಸ್ಟಾಲ್ ಬದಿಯಲ್ಲಿ ಮಟ್ಕಾ ಜುಗಾರಿ ನಡೆಸುತ್ತಿದ್ದ ವ್ಯಕ್ತಿ ಯನ್ನು ಬ್ರಹ್ಮಾವರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಅಶೋಕ ಮಾಳಬಾಗಿ ಅವರು ಬಂಧಿಸಿದ್ದಾರೆ.

ಬ್ರಹ್ಮಾವರ ಪೊಲೀಸ್‌ ಠಾಣೆ ಪೊಲೀಸ್ ಉಪನಿರೀಕ್ಷಕರಾದ ಅಶೋಕ ಮಾಳಬಾಗಿ ರವರು ದಿನಾಂಕ 27.06.2025 ರಂದು  ಠಾಣೆಯಲ್ಲಿ ಇರುವಾಗ ಹೇರಾಡಿ ಯಡ್ತಾಡಿ ಗ್ರಾಮದ ಬೀಟ್‌ ಸಿಬ್ಬಂದಿ ರವರು ಅಶೋಕ ಮಾಳಬಾಗಿ ಅವರಿಗೆ ಕರೆ ಮಾಡಿ ಹೇರಾಡಿ ಗ್ರಾಮದ ರೈಲ್ವೇ ಸ್ಟೇಷನ್‌ ಬಳಿ ಇರುವ ರಶ್ಮಿ ಬಾರ್‌ ಎದುರುಗಡೆ ಇರುವ ರಶ್ಮಿ ಬೀಡಾ ಸ್ಟಾಲ್ನ ಬದಿಯಲ್ಲಿ ದಿನೇಶ್‌ ಎಂಬಾತನು ಸಾರ್ವಜನಿಕ ಸ್ಥಳದಲ್ಲಿ ಜನರನ್ನು ಸೇರಿಸಿಕೊಂಡು ಮಟ್ಕಾ ಜುಗಾರಿ ಆಟಕ್ಕಾಗಿ ಹಣವನ್ನು ಸಂಗ್ರಹಿಸುತ್ತಿರುವ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ ಎನ್ನಲಾಗಿದೆ.

ಆ ಕೂಡಲೇ ಸ್ಥಳಕ್ಕೆ ಪೊಲೀಸರು ದಾಳಿ ನಡೆಸಿದಾಗ   ಆರೋಪಿತ ದಿನೇಶ ಎಂಬವನು ರಸ್ತೆಯಲ್ಲಿ ಹೋಗುತ್ತಿದ್ದ  ಜನರಿಂದ ಹಣವನ್ನು ಸಂಗ್ರಹಿಸಿ ಚೀಟಿಯಲ್ಲಿ ಬರೆಯುತ್ತಿದ್ದು, ಆತನು ಮಟ್ಕಾ ಜುಗಾರಿ ಆಟಕ್ಕಾಗಿ ಜನರಿಂದ ಹಣವನ್ನು ತೆಗೆದುಕೊಳ್ಳುತ್ತಿದ್ದು  ಆರೋಪಿ ದಿನೇಶನನ್ನು ಹಿಡಿದು ಬಂಧಿಸಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಾನು ಮಟ್ಕಾ ಜುಗಾರಿ ಆಡುತ್ತಿರುವುದಾಗಿ ಒಪ್ಪಿಕೊಂಡಿದ್ದು ಅಲ್ಲದೇ ತಾನು ಸಂಗ್ರಹಿಸಿದ ಹಣವನ್ನು ಒಟ್ಟು ಮಾಡಿ ಉಡುಪಿಯ ಗಣೇಶ ಎಂಬವನಿಗೆ ನೀಡುವುದಾಗಿ ತಿಳಿಸಿರುತ್ತಾನೆ ಎಂದು ದೂರಿನಲ್ಲಿ ದಾಖಲಿಸಿದ್ದಾರೆ. 

ಆರೋಪಿಯು ಸಂಗ್ರಹಿಸಿದ್ದ ನಗದು ಹಣ ರೂ. 1120/-, ಮಟ್ಕಾ ಚೀಟಿ–1, ಬಾಲ್ ಪೆನ್-1 ನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ U/S 112 BNS & U/S 78(i)(iii) KP ACT ರಂತೆ ಪ್ರಕರಣ ದಾಖಲಾಗಿದೆ.

error: No Copying!