
- ಉಡುಪಿ: ದಿನಾಂಕ:18-06-2025(ಹಾಯ್ ಉಡುಪಿ ನ್ಯೂಸ್) 76 ಬಡಗಬೆಟ್ಟು ಗ್ರಾಮದ ಬೀಡಿನ ಗುಡ್ಡೆ ನಿವಾಸಿ ಮೋಹನ (53)ಎಂಬವರು KA-20-MB-9608 EECO Maruthi Company ಕಾರನ್ನು ಹೊಂದಿದ್ದು ಪ್ರತಿದಿನ ಅಂಗಡಿಗೆ ಹೋಗಿ ಬಂದು ಮನೆಯ ಮುಂದೆ ಸುಮಾರು 60 ಮೀಟರ್ ದೂರದಲ್ಲಿ ಉಮೇಶ ಎಂಬುವವರಿಗೆ ಸಂಬಂಧಪಟ್ಟ ಗದ್ದೆಯಲ್ಲಿ ಕಾರನ್ನು ನಿಲ್ಲಿಸುತ್ತಿದ್ದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
- ಮೋಹನರವರು ಪ್ರತಿದಿನದಂತೆ ದಿನಾಂಕ 16/06/2025 ರಂದು ಕೆಲಸ ಮುಗಿಸಿಕೊಂಡು ಬಂದು ರಾತ್ರಿ ಕಾರನ್ನು ಲಾಕ್ ಮಾಡಿ ನಿಲ್ಲಿಸಿ ಮನೆಗೆ ಹೋಗಿದ್ದು, ಮರುದಿನ ದಿನಾಂಕ 17/06/2025 ಬೆಳಿಗ್ಗೆ ಕಾರನ್ನು ನಿಲ್ಲಿಸಿದ ಸ್ಥಳಕ್ಕೆ ಬಂದು ನೋಡುವಾಗ ಕಾರು ನಿಲ್ಲಿಸಿದ ಸ್ಥಳದಲ್ಲಿ ಇರುವುದಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.
- ದಿನಾಂಕ 16/06/2025 ರಂದು ರಾತ್ರಿ ಯಾರೋ ಕಳ್ಳರು ಮೋಹನ ರವರ ಕಾರನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
- ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ:303(2)BNS ರಂತೆ ಪ್ರಕರಣ ದಾಖಲಾಗಿದೆ.
- ಉಡುಪಿ ಬೀಡಿನ ಗುಡ್ಡೆ ಅಂಗನವಾಡಿ ಶಾಲೆ ಸುತ್ತ ಮುತ್ತಲಿನ ಪರಿಸರದಲ್ಲಿ ಹೊರಗಿನ ಜಿಲ್ಲೆಗಳಿಂದ ಮತ್ತು ಹೊರಗಿನ ರಾಜ್ಯಗಳಿಂದ ವಲಸೆ ಬಂದಿರುವ ಕೂಲಿ ಕಾರ್ಮಿಕರು ಹೆಚ್ಚು ವಾಸವಾಗಿದ್ದು ,ಇವರಲ್ಲಿ ಕೆಲವರು ನಿರುದ್ಯೋಗಿ ಯುವಕರು ಕಳ್ಳತನ ನಡೆಸುವುದು, ಸ್ಥಳೀಯರ ವಾಹನಗಳಿಗೆ ಹಾನಿ ಮಾಡಿ ಪುಂಡಾಟಿಕೆ ನಡೆಸುವುದು, ಇನ್ನಿತರ ಜೂಜು, ಕುಕ್ರತ್ಯಗಳನ್ನು ನಡೆಸುವುದು, ಮಹಿಳೆಯರಿಗೆ ಚುಡಾಯಿಸುವುದು ಇಂತಹ ಘಟನೆಗಳು ನಡೆಯುತ್ತಿದ್ದು ಈ ಬಗ್ಗೆ ಪೊಲೀಸ್ ಇಲಾಖೆ ಕನಿಷ್ಠ ದಿನಕ್ಕೆ ಎರಡು ಬಾರಿಯಾದರೂ ರೌಂಡ್ಸ್ ಹಾಕಬೇಕು ಹಾಗೂ ಇಲ್ಲಿ ತಡರಾತ್ರಿ ಸಂಚರಿಸುವ ಯುವಕರ ಮೇಲೆ ನಿಗಾ ವಹಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.