Spread the love

ಕುಂದಾಪುರ: ದಿನಾಂಕ :04-06-2025(ಹಾಯ್ ಉಡುಪಿ ನ್ಯೂಸ್) ಕುಂದಾಪುರ ಶಾಸ್ತ್ರೀ ವೃತ್ತದಲ್ಲಿ ಸಾರ್ವಜನಿಕ ಶಾಂತಿ ಭಂಗ ಉಂಟು ಮಾಡಿದ ಮೂವರು ಯುವಕರನ್ನು ಕುಂದಾಪುರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ನಂಜಾ ನಾಯ್ಕ ಅವರು ಬಂಧಿಸಿದ್ದಾರೆ.

ಕುಂದಾಪುರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ನಂಜಾ ನಾಯ್ಕ ಅವರು ದಿನಾಂಕ: 03/06/2025 ರಂದು ರಾತ್ರಿ ಸಿಬ್ಬಂದಿಯವರೊಂದಿಗೆ ಠಾಣಾ ಸರಹದ್ದಿನಲ್ಲಿ ಗಸ್ತು ಸಂಚರಿಸುತ್ತಾ  ಕುಂದಾಪುರ ಶಾಸ್ತ್ರೀ ಪಾರ್ಕ್ ತಲುಪಿದಾಗ ಅಲ್ಲಿ ರಾಯಲ್‌ ಚಾಲೇಂಜರ್ಸ್ ಬೆಂಗಳೂರು ತಂಡ ಗೆದ್ದಿದ್ದರಿಂದ ಕುಂದಾಪುರ ಶಾಸ್ತ್ರೀ ಸರ್ಕಲ್‌ ಬಳಿ ಜನ ಸೇರಿ ಸಂಭ್ರಮ ಮಾಡುತ್ತಿದ್ದು ಕೆಲವು ಸಮಯದ ನಂತರ ಅಲ್ಲಿ ಸಂಭ್ರಮ ಆಚರಣೆ ಮಾಡಿ ಅಲ್ಲಿಂದ ಹೋಗಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ದಿನಾಂಕ 04-06-2025 ರಂದು ರಾತ್ರಿ 12:15 ಗಂಟೆಯ ಸಮಯಕ್ಕೆ ಸಂಭ್ರಮ ಆಚರಣೆ ಆದ ಬಳಿಕವು ಕೆಲವರು ಕುಂದಾಪುರ ಶಾಸ್ತ್ರೀ ಸರ್ಕಲ್‌ ಬಳಿ ಆಟೋ ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ KA 25 MA 8823 ಮಹೇಂದ್ರ ಎಸ್‌.ಯು.ವಿ 500 ಮೇಲೆ ನಿಂತುಕೊಂಡು ಕಾರಿನ ಸುತ್ತ ಗುಂಪು ಸೇರಿದ್ದು ಆ ಸಮಯ ಅಲ್ಲಿಗೆ ರಾತ್ರಿ ಬೀಟ್‌ ಸಿಬ್ಬಂದಿಯಯವರು ಮತ್ತು ಹೋಮ್‌ ಗಾರ್ಡ್ ಮತ್ತು ಇ ಆರ್‌ ವಿ ಕರ್ತವ್ಯದಲ್ಲಿದ್ದ ಸಿಬ್ಬಂದಿಯವರು ಹಾಗೂ ವಾಹನ ಚಾಲಕ ರವರು ಆ ಸ್ಥಳಕ್ಕೆ ಬಂದಿದ್ದು ಆ ಸಮಯ ನಾಲ್ಕೈದು ಜನ ಯುವಕರು ಪರಸ್ಪರ ಮೈ ಕೈ ದೂಡಾಡಿಕೊಂಡು ಹೊಯಿ ಕೈ ಮಾಡುತ್ತಾ ಸ್ಥಳದಲ್ಲಿ ಅಶಾಂತಿ ಉಂಟು ಮಾಡುತ್ತಿರುವುದು ಕಂಡು ಬಂತು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ನಂತರ ಪೊಲೀಸರು ಜೀಪಿನಿಂದ ಇಳಿದು ಸಿಬ್ಬಂದಿಯವರ ಜೊತೆ ಗಲಾಟೆ ಮಾಡುತ್ತಿದ್ದ ಸ್ಥಳಕ್ಕೆ ಹೋಗುತ್ತಿದ್ದಂತೆ ಗಲಾಟೆ ಮಾಡುತ್ತಿದ್ದವರು ಅಲ್ಲಿಂದ KA 25 MA 8823 ವಾಹನವನ್ನು ಚಲಾಯಿಸಿಕೊಂಡು ಚದುರಿ ಓಡಿ ಹೋಗಿರುತ್ತಾರೆ ಎನ್ನಲಾಗಿದೆ. ಗಲಾಟೆ ಮಾಡುತ್ತಿದ್ದ ಯುವಕರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದಾಗ ಅವರುಗಳ ಹೆಸರು ಕುಂದಾಪುರದ ಸುಶಾಂತ್ , ಕಾರ್ತಿಕ್‌ ಮತ್ತು ರಜತ್‌ ಹಾಗೂ ಇತರರು ಎಂಬುದಾಗಿ ತಿಳಿಯಿತು ಎನ್ನಲಾಗಿದೆ.. ಕುಂದಾಪುರ ಶಾಸ್ತ್ರಿ ಪಾರ್ಕಿನ ರಿಕ್ಷಾ ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿಗಳು ಪರಸ್ಪರ ಮೈ ಕೈ ದೂಡಾಡಿಕೊಂಡು ಸಾರ್ವಜನಿಕರ ಶಾಂತಿಗೆ ಭಂಗ ಉಂಟುಮಾಡಿರುತ್ತಾರೆ ಎಂದು ದೂರು ದಾಖಲಿಸಿದ್ದಾರೆ.

ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಯಲ್ಲಿ ಅಪರಾಧ ಕ್ರಮಾಂಕ: 68/2025 ಕಲಂ 194 (2) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!