
ಕುಂದಾಪುರ: ದಿನಾಂಕ 02/06/2025 (ಹಾಯ್ ಉಡುಪಿ ನ್ಯೂಸ್) ಪಂಚಗಂಗಾವಳಿ ಹೊಳೆಯಲ್ಲಿ ಮರಳು ಕಳ್ಳತನ ನಡೆಸುತ್ತಿದ್ದವರನ್ನು ಕುಂದಾಪುರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ನಂಜಾನಾಯ್ಕ್ ಎನ್ ರವರು ಬಂಧಿಸಿದ್ದಾರೆ.
ಕುಂದಾಪುರ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ನಂಜಾನಾಯ್ಕ ಎನ್ ಅವರು ದಿನಾಂಕ::01-06-2025 ರಂದು ಠಾಣೆಯಲ್ಲಿರುವಾಗ ವಡೇರಹೋಬಳಿ ಗ್ರಾಮದ ಠಾಣಾ ಬೀಟ್ ಸಿಬ್ಬಂದಿಯಾದ ಹೆಚ್.ಸಿ ಸೂರ್ಯ ರವರು ಕುಂದಾಪುರ ತಾಲೂಕು ವಡೇರಹೋಬಳಿ ಗ್ರಾಮದ ನಾನಾ ಸಾಹೇಬ್ ರಸ್ತೆಯ ಕೊನೆಯಲ್ಲಿ ರಿಂಗ್ ರೋಡ್ ಸಮೀಪ ಪಂಚಗಂಗಾವಳಿ ಹೊಳೆಯಲ್ಲಿ ಕೆಲವು ಜನರು ಮರಳನ್ನು ತೆಗೆದು ದೋಣಿಯಲ್ಲಿ ತುಂಬಿಸುತ್ತಿರುವುದಾಗಿ ಮಾಹಿತಿ ನೀಡಿದ್ದು ಕೂಡಲೇ ಠಾಣಾ ಸಿಬ್ಬಂದಿಯರೊಂದಿಗೆ ವಡೇರಹೋಬಳಿ ಗ್ರಾಮದ ನಾನಾ ಸಾಹೇಬ್ ರಸ್ತೆಯ ಕೊನೆಯಲ್ಲಿ ಪಂಚಗಂಗಾವಳಿ ಹೊಳೆಯ ಸಮೀಪಕ್ಕೆ ದಾಳಿ ನಡೆಸಿದಾಗ ಆರೋಪಿತ ಉದಯ ಮೆಂಡನ್ ಎಂಬಾತನು ವಶಕ್ಕೆ ಸಿಕ್ಕಿದ್ದು ಇನ್ನೋರ್ವ ವ್ಯಕ್ತಿ ಸುನಿಲ್ ಎಂಬಾತನು ಓಡಿ ಹೋಗಿರುತ್ತಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಸ್ಥಳದಲ್ಲಿ ಒಂದು ದೋಣಿಯಲ್ಲಿ ಸುಮಾರು 1 ½ ಯುನಿಟ್ ನಷ್ಟು ಮರಳನ್ನು ತುಂಬಿಸಿಟ್ಟಿರುವುದು ಹಾಗೂ ಸ್ಥಳದಲ್ಲಿ KA20 C 6070 ನೇ 407 ಟಿಪ್ಪರ್ ವಾಹನ ನಿಂತಿರುವುದು ಕಂಡುಬಂದಿದೆ ಎನ್ನಲಾಗಿದೆ.
ಸ್ಥಳದಲ್ಲಿದ್ದ ದೋಣಿಯಲ್ಲಿರುವ ಮರಳನ್ನು ಪಂಚಗಂಗಾವಳಿ ಹೊಳೆಯಿಂದ ತೆಗೆದಿದ್ದು ಆ ಮರಳನ್ನು ಸ್ಥಳದಲ್ಲಿರುವ ಟಿಪ್ಪರ್ ವಾಹನಕ್ಕೆ ತುಂಬಿಸಿ ಸಾಗಾಟ ಮಾಡಲು ಟಿಪ್ಪರನ್ನು ತಂದಿರಿಸಿಕೊಂಡಿರುವುದಾಗಿ ಆಪಾದಿತ ಉದಯ ಮೆಂಡನ್ ತಿಳಿಸಿದ್ದಾನೆ ಎಂದು ದೂರಿನಲ್ಲಿ ದಾಖಲಿಸಿದ್ದಾರೆ. ಆಪಾದಿತರು ಸಂಘಟಿತರಾಗಿ ಯಾವುದೇ ಪರವಾನಿಗೆ ಇಲ್ಲದೇ ಪಂಚಗಂಗಾವಳಿ ಹೊಳೆಯಿಂದ ಮರಳನ್ನು ಕಳವು ಮಾಡಿ ಸಾಗಾಟ ಮಾಡಲು ಶೇಖರಿಸಿರುವುದು ಕಂಡುಬಂದಿರುವುದರಿಂದ ಸ್ಥಳದಲ್ಲಿದ್ದ ಕೃತ್ಯಕ್ಕೆ ಬಳಸಿದ್ದ ಫೈಬರ್ ದೋಣಿ-1(ಅಂದಾಜು ಮೌಲ್ಯ-15,000/-), 1 ½ ಯುನಿಟ್ ಮರಳು(ಅಂದಾಜು ಮೌಲ್ಯ-5,000/-), KA20 C 6070 ನೇ 407 ಟಿಪ್ಪರ್ ವಾಹನ(ಅಂದಾಜು ಮೌಲ್ಯ-5,00,000/-) ಹಾಗೂ ಕಬ್ಬಿಣದ ಹಾರೆ-1, ಫೈಬರ ಬುಟ್ಟಿಗಳು-2 ನ್ನು ಮುಂದಿನ ಕ್ರಮದ ಬಗ್ಗೆ ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಕಲಂ: 303(2), 112 BNS & ಕಲಂ: 4, 4(1) (a), 21 Mines and minerals Regulation of developmentact ನಂತೆ ಪ್ರಕರಣ ದಾಖಲಾಗಿದೆ.