Spread the love

ಶಿರ್ವ: ದಿನಾಂಕ :01-06-2025 (ಹಾಯ್ ಉಡುಪಿ ನ್ಯೂಸ್) ಶಂಕರಪುರದ ಬಸ್ ನಿಲ್ದಾಣದ ಬಳಿ ಮಟ್ಕಾ ಜುಗಾರಿ ನಡೆಸುತ್ತಿದ್ದ ವ್ಯಕ್ತಿಯನ್ನು ಶಿರ್ವ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಮಂಜುನಾಥ ಮರಬದ ಅವರು ಬಂಧಿಸಿದ್ದಾರೆ.

ಶಿರ್ವ  ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ಮಂಜುನಾಥ ಮರಬದ ಅವರು ದಿನಾಂಕ 31.05.2025 ರಂದು ರೌಂಡ್ಸ್‌ ಕರ್ತವ್ಯದಲ್ಲಿರುವಾಗ ಬೀಟ್‌ ಸಿಬ್ಬಂದಿಯ ಮಾಹಿತಿಯ ಮೇರೆಗೆ ಮಾಹಿತಿ ಬಂದ ಸ್ಥಳವಾದ ಕುರ್ಕಾಲು ಗ್ರಾಮದ ಶಂಕರಪುರದ ಅಶ್ವತಕಟ್ಟೆ ಬಸ್‌ ನಿಲ್ದಾಣದ ಬಳಿ ಮಟ್ಕಾ ಚೀಟಿ ಬರೆಯುತ್ತಿದ್ದ ಸ್ಥಳಕ್ಕೆ ತೆರಳಿದಾಗ ಸಾರ್ವಜನಿಕ ಸ್ಥಳದಲ್ಲಿ ಜನರು ಗುಂಪುಗೂಡಿಕೊಂಡು ನಿಂತುಕೊಂಡಿದ್ದು, ಸಾರ್ವಜನಿಕರ  ಮಧ್ಯದಲ್ಲಿ ಓರ್ವ ವ್ಯಕ್ತಿ  ಅಲ್ಲಿ ಸೇರಿದ ಜನರಿಂದ 1 ರೂಪಾಯಿಗೆ 70 ರೂಪಾಯಿ ನೀಡುವುದಾಗಿ ಹೇಳಿ ಹಣ ಸಂಗ್ರಹ ಮಾಡುತ್ತಿರುವುದು ಕಂಡು ಕೂಡಲೇ ದಾಳಿ ಮಾಡಿ ಮಟ್ಕಾ ಚೀಟಿ ಬರೆಯುತ್ತಿದ್ದವನ ಹೆಸರು ವಿಳಾಸ  ವಿಚಾರಿಸಿದಾಗ ಆತನು ತನ್ನ  ಹೆಸರು  ವಿಠಲ ಎಂದು  ತಿಳಿಸಿರುತ್ತಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಆತನ ವಶದಲ್ಲಿ ಮಟ್ಕಾ ಸಂಖ್ಯೆ ಬರೆದಿರುವ  ಚೀಟಿ – 1, ನಗದು ಹಣ ರೂಪಾಯಿ 1,200/- ಮತ್ತು ಬಾಲ್ ಪೆನ್ -1 ಇರುವುದು ಕಂಡು ಬಂದಿದ್ದು ,ಇದರ ಬಗ್ಗೆ ವಿಚಾರಿಸಿದಾಗ ಜೂಜಾಟದ  ಬುಕ್ಕಿ ಉಡುಪಿಯ ಲಿಯೋ  ಕರ್ನೆಲಿಯೋ ತಿಳಿಸಿದಂತೆ, ನಾನು ಮಟ್ಕಾ ಜುಗಾರಿ ಹಣ ಸಾರ್ವಜನಿಕರಿಂದ ಕಾನೂನು ಬಾಹಿರವಾಗಿ ಸಂಗ್ರಹಿಸುತ್ತಿರುವುದಾಗಿ ಒಪ್ಪಿಕೊಂಡಿರುತ್ತಾನೆ ಎನ್ನಲಾಗಿದೆ.

ವಿಠಲ ಮತ್ತು ಲಿಯೋ  ಕರ್ನೇಲಿಯೋ ಇವರುಗಳು ಜೊತೆಯಾಗಿ ತಮ್ಮ ಸ್ವಂತ ಲಾಭಕ್ಕಾಗಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಕಾನೂನು ಬಾಹಿರವಾಗಿ ಮಟ್ಕಾ ಜುಗಾರಿ ಆಟದ ಬಗ್ಗೆ ಸಾರ್ವಜನಿಕರನ್ನು ನಂಬಿಸಿ ಮೋಸ ಮಾಡಿ ಅವರಿಂದ ಹಣ ಸಂಗ್ರಹ ಮಾಡುತ್ತಿದ್ದಾರೆ ಎಂದು ದೂರು ದಾಖಲಾಗಿದೆ

ಈ ಬಗ್ಗೆ ಶಿರ್ವ ಪೊಲೀಸ್‌ ಠಾಣೆಯಲ್ಲಿ  ಕಲಂ 112,316(2),318(2), R/W 3(5) BNS 2023 ಮತ್ತು 78(i)(iii) K P ACT ನಂತೆ ಪ್ರಕರಣ ದಾಖಲಾಗಿದೆ.

error: No Copying!