Spread the love

ಬೆಂಗಳೂರು : ದಿನಾಂಕ: 28-05-2025(ಹಾಯ್ ಉಡುಪಿ ನ್ಯೂಸ್) ತಮಿಳು ನಟ ಕಮಲಹಾಸನ್ ನಿನ್ನೆ ಬೆಂಗಳೂರಿನಲ್ಲಿ ಕನ್ನಡ ಭಾಷೆಯ ಬಗ್ಗೆ ಹೇಳಿರುವ ಹೇಳಿಕೆ ರಾಜ್ಯಾದ್ಯಂತ ವಿವಾದ ಸ್ರಷ್ಟಿಸಿದ್ದು ಕನ್ನಡಪರ ಸಂಘಟನೆಗಳು ಕಮಲಹಾಸನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವಂತೆಯೇ ಇತ್ತ ಕನ್ನಡ ನಟ ಶಿವರಾಜ್ ಕುಮಾರ್ ಇಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕಮಲಹಾಸನ್ ಪರವಾಗಿ ಬ್ಯಾಟಿಂಗ್ ನಡೆಸಿದ್ದು ಕನ್ನಡಿಗರ ಅಸಮಾಧಾನಕ್ಕೆ ಕಾರಣವಾಗಿದೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶಿವರಾಜ್ ಕುಮಾರ್ ಕಮಲಹಾಸನ್ ಗೂ ಡಾ.ರಾಜ್ ಕುಮಾರ್ ಅವರಿಗೂ ಉತ್ತಮ ಸ್ನೇಹವಿತ್ತು.ಅವರನ್ನು ನಾನೂ ಗೌರವಿಸುತ್ತೇನೆ, ಕಮಲಹಾಸನ್ ಅವರಿಗೆ ಕನ್ನಡದ ಮೇಲೆ ಪ್ರೀತಿ ಇದೆ. ಯಾಕೆ ವಿವಾದವನ್ನು ದೊಡ್ಡದು ಮಾಡುತ್ತೀರಾ? ಅವರ ಹೇಳಿಕೆಯನ್ನು ಖಂಡಿಸಿರುವ ಸಂಘಟನೆಗಳ ಕನ್ನಡ ಪ್ರೀತಿ ನಿರಂತರವಾಗಿ ಇರಬೇಕು. ಅಪರೂಪಕ್ಕೆ ಅವಕಾಶ ಸಿಕ್ಕಾಗ ಮಾತ್ರ ಕನ್ನಡ ಪ್ರೇಮ ಪ್ರದರ್ಶನ ಮಾಡುವುದು ಅಲ್ಲ ಎಂದು ಹೇಳುವ ಮೂಲಕ ತಮಿಳು ನಟ ಕಮಲಹಾಸನ್ ಬೆನ್ನಿಗೆ ನಿಂತಿರುವುದು ಕನ್ನಡ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

error: No Copying!