Spread the love

ಬೆಂಗಳೂರು: ದಿನಾಂಕ:28-05-2025 (ಹಾಯ್ ಉಡುಪಿ ನ್ಯೂಸ್) ಕರ್ನಾಟಕದ ನೆಲದಲ್ಲಿ ಬಂದು ಅದೂ ಬೆಂಗಳೂರಿನಲ್ಲಿ ಕನ್ನಡದ ಬಗ್ಗೆ ಅವಹೇಳನ ಮಾಡಿ ಕಮಲಹಾಸನ್ ಮಾತನಾಡುತ್ತಿರುವ ವಿಚಾರ ನನ್ನ ಗಮನಕ್ಕೆ ಬರುವಾಗ ವಿಳಂಬವಾಗಿತ್ತು. ಕೂಡಲೇ ಗಮನಕ್ಕೆ ಬಂದಿದ್ದರೆ ಅವರ ಪತ್ರಿಕಾ ಗೋಷ್ಠಿ ಗೆ ಮುತ್ತಿಗೆ ಹಾಕಿ ಸರಿಯಾಧ ಉತ್ತರ ನೀಡುತ್ತಿದ್ದೆವು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ನಾರಾಯಣ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮಿಳು ಭಾಷೆಯಿಂದ ಕನ್ನಡ ಬಂದಿದೆ ಎಂದು ಹೇಳಲು ಈ ಕಮಲ ಹಾಸನ್ ಯಾರು? ಈತ ತಮಿಳಿನ ಓರ್ವ ಮಾಮೂಲಿ ನಟ , ಕನ್ನಡ ಭಾಷೆಯ ಚಲನ ಚಿತ್ರಗಳಲ್ಲಿ ನಟಿಸಿ ಹಣ ಬಾಚಿ ಕೊಂಡು ಹೋಗಿದ್ದಾರೆ. ತಮಿಳಿಗರ ಓಲೈಕೆಗಾಗಿ ಈ ರೀತಿ ಕಮಲಹಾಸನ್ ಮಾತನಾಡಿದ್ದಾರೆ,ಕಮಲ ಹಾಸನ್ ಕನ್ನಡಿಗರ ಕ್ಷಮೆ ಯಾಚಿಸಬೇಕು ಎಂದು ನಾರಾಯಣ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

error: No Copying!