
- ಕೊಲ್ಲೂರು: ದಿನಾಂಕ:22-04-2025(ಹಾಯ್ ಉಡುಪಿ ನ್ಯೂಸ್) ಹೊಸೂರು ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಯುವಕನಿಗೆ ವ್ಯಕ್ತಿ ಯೋರ್ವ ಜೀವ ಬೆದರಿಕೆ ಹಾಕಿದ್ದಾನೆ ಎಂದು ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
- ಕುಂದಾಪುರ ತಾಲೂಕು ಹೊಸೂರು ಗ್ರಾಮದ ನಿವಾಸಿ ಎಸ್.ಎನ್ ಶ್ರೀಕಾಂತ ಎಂಬವರ ತಾಯಿ ನಾಗರತ್ನ ರವರು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು, ದಿನಾಂಕ 16/04/2025 ರಂದು ಸಂಜೆ ಕುಂದಾಪುರ ತಾಲೂಕಿನ ಹೊಸೂರು ಗ್ರಾಮದ ಮತ್ತಿಕೊಡ್ಲುವಿನಿಂದ ಅರಾಟೆ ಎಂಬಲ್ಲಿಗೆ ಹೋಗುವ ರಸ್ತೆಯಲ್ಲಿ ಹೋಗುತ್ತಿರುವಾಗ, ಆಪಾದಿತ ಅಶೋಕ್ ಎಂಬವನು KA20-W-8253ನೇ ಬೈಕಿನಲ್ಲಿ ಬಂದು ಎಸ್.ಎನ್ ಶ್ರೀಕಾಂತ ರವರನ್ನು ಅಕ್ರಮವಾಗಿ ಅಡ್ಡಗಟ್ಟಿ, ಜೀವ ಬೆದರಿಕೆ ಹಾಕಿರುತ್ತಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
- ಆ ಸಮಯ ಶ್ರೀಕಾಂತ್ ಹೆದರಿ ಗಟ್ಟಿಯಾಗಿ ಬೊಬ್ಬೆ ಹೊಡೆದಾಗ ತಾಯಿ ಹಾಗೂ ಸಿಂಗಾರಿ ಎಂಬವರು ಬಂದಿದ್ದು ಅವರನ್ನು ಕಂಡ ಆಪಾದಿತ ಅಶೋಕ ಅಲ್ಲಿಂದ ಓಡಿ ಹೋಗಿರುತ್ತಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
- ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಕಲಂ: 126 (2), 352, 131, 351 (2) BNS & 3 (1), (r), (s), 3 (1)(e), 3(2), (v-a), SC/ST act 2015 ರಂತೆ ಪ್ರಕರಣ ದಾಖಲಾಗಿದೆ.