Spread the love

ಕುಂದಾಪುರ: ದಿನಾಂಕ:08-03-2025(ಹಾಯ್ ಉಡುಪಿ ನ್ಯೂಸ್) ತಲ್ಲೂರು ಗ್ರಾಮದ ನಿವಾಸಿ ಯುವತಿ ಯೋರ್ವಳನ್ನು ಮದುವೆಯಾದ ಒಂದೇ ತಿಂಗಳಲ್ಲಿ ಗಂಡ ಹಾಗೂ ಗಂಡನ ಮನೆಯವರು ವರದಕ್ಷಿಣೆ ಹಣ ತರುವಂತೆ ಪೀಡಿಸಿ, ಮಾನಸಿಕ ಹಿಂಸೆ ನೀಡಿ ಮನೆಯಿಂದ ಹೊರ ಹಾಕಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಕುಂದಾಪುರ ,ತಲ್ಲೂರು ಗ್ರಾಮದ ನಿವಾಸಿ ಜೆನಿಫರ್ ಲೋಬೋ (25) ಇವರ ಗಂಡ ಪ್ರವೀಣ ಕಿಶೋರ ಡಿಸೋಜ 1ನೇ ಆರೋಪಿ ಯಾಗಿದ್ದು 2ನೇ ಆರೋಪಿ ಲೂಸಿ ಡಿಸೋಜಾ ರವರು ಅತ್ತೆಯಾಗಿದ್ದು, 3ನೇ ಆರೋಪಿ ಕ್ಲಾರಾ ಮೆನೇಜಸ್‌ ರವರು ಅತ್ತಿಗೆಯಾಗಿರುತ್ತಾರೆ, ಮತ್ತು 4ನೇ ಆರೋಪಿಯು ಅತ್ತಿಗೆಯ ಗಂಡನಾಗಿರುತ್ತಾರೆ ಎಂದು ಜೆನಿಫರ್ ಲೋಬೋ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಜೆನಿಫರ್ ಲೋಬೋ ಅವರು ಆರೋಪಿ 1ನೇ ಪ್ರವೀಣ ಕಿಶೋರ ಡಿಸೋಜ ರವರೊಂದಿಗೆ ದಿನಾಂಕ 12/01/2025 ರಂದು ಕ್ರಿಶ್ಚಿಯನ್‌ ಸಂಪ್ರದಾಯದಂತೆ ಮದುವೆಯಾಗಿದ್ದು, ಮದುವೆ ಪೂರ್ವದಲ್ಲಿ ಆರೋಪಿತರುಗಳು  ಜೆನಿಫರ್ ಲೋಬೋ ಕಡೆಯವರಲ್ಲಿ ವರದಕ್ಷಿಣೆಗೆ ಬೇಡಿಕೆ ಇರಿಸಿ.  ಜೆನಿಫರ್ ಲೋಬೋ ರ ತಾಯಿಯವರಿಂದ ಒತ್ತಾಯವಾಗಿ 37 ಪವನ್‌ ಚಿನ್ನಾಭರಣವನ್ನು ವರದಕ್ಷಿಣೆಯಾಗಿ ಪಡೆದಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಮದುವೆ ನಂತರ ಜೆನಿಫರ್ ಲೋಬೋ ರವರನ್ನು ಕುಂದಾಪುರ ಆನಗಳ್ಳಿ ಗ್ರಾಮದ ಕಳಂಜೆ ಎಂಬಲ್ಲಿರುವ 1 ನೇ ಆರೋಪಿ ಗಂಡ ಪ್ರವೀಣ್ ಕಿಶೋರ ಡಿ ಸೋಜನ ಮನೆಗೆ ಕರೆದುಕೊಂಡು ಹೋಗಿ ವಾಸ್ತವ್ಯ ಇದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಆ ಸಮಯ ಆರೋಪಿತರುಗಳೆಲ್ಲರೂ‌ ಜೆನಿಫರ್ ಲೋಬೋ ರವರನ್ನು ನಗದಾಗಿ ವರದಕ್ಷಿಣೆ ಹಣವನ್ನು ತಂದಿಲ್ಲವೆಂದು ಹಂಗಿಸಿ ಮಾನಸಿಕ ಹಿಂಸೆ ನೀಡಿ, ಮನೆಯಿಂದ ಹೊರಹೋಗಲು ಹೇಳಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಆ ನಂತರ ಜೆನಿಫರ್ ಲೋಬೋ ರವರು ದಿನಾಂಕ 09/02/2025 ರಂದು ತಲ್ಲೂರು ಗ್ರಾಮದ ಚರ್ಚ್ ಹಾಲ್‌ ಹತ್ತಿರ ಇರುವ ತನ್ನ ತವರು ಮನೆಗೆ ಹೋಗಿರುವುದಾಗಿ‌ ಪೊಲೀಸರಿಗೆ ದೂರು ನೀಡಿದ್ದಾರೆ.

ಜೆನಿಫರ್ ಲೋಬೋ ಅವರು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ  ಕಲಂ: 85 ಜೊತೆಗೆ 3(5) BNS & 3, 4 D P Act ರಂತೆ ಪ್ರಕರಣ ದಾಖಲಾಗಿದೆ.

error: No Copying!