Spread the love

ಕಾರ್ಕಳ: ದಿನಾಂಕ:22-07-2024(ಹಾಯ್ ಉಡುಪಿ ನ್ಯೂಸ್) ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜುಗಾರಿ ಆಡುತ್ತಿದ್ದ 9 ಜನರನ್ನು ಕಾರ್ಕಳ ನಗರ ಪೊಲೀಸ್‌ ಠಾಣೆಯ ಪಿಎಸ್ಐ ಯವರಾದ ಸಂದೀಪ್ ಕುಮಾರ್ ಅವರು ಬಂಧಿಸಿದ್ದಾರೆ.

ದಿನಾಂಕ: 20-07-2024 ರಂದು ಕಾರ್ಕಳ ತಾಲೂಕು ಕಸಬಾ ಗ್ರಾಮದ ನಿಟ್ಟೆ ಗಾಜ್ರಿಯಾ ಆಸ್ಪತ್ರೆಯ ಬಳಿಯ ಸಾರ್ವಜನಿಕ ಹಾಡಿಯಲ್ಲಿ ಅಕ್ರಮವಾಗಿ ಹಣವನ್ನು ಪಣವಾಗಿಟ್ಟು ಉಲಾಯಿ, ಪಿದಾಯಿ ಎಂಬ ಹೆಸರಿನ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದಲ್ಲಿಗೆ  ಖಚಿತ ಮಾಹಿತಿಯಂತೆ ಕಾರ್ಕಳ ನಗರ ಪೊಲೀಸ್‌ ಠಾಣೆಯ ಪಿಎಸ್ಐ ಯವರಾದ ಸಂದೀಪ ಕುಮಾರ್ ಅವರು ದಾಳಿ ನಡೆಸಿ ಅಲ್ಲಿ  ಜುಗಾರಿ ಆಡುತ್ತಿದ್ದ ಸೋಮನಾಥ್‌ ಪಾಠಕ್‌ (77) ,ಜಯಂತ್‌ (60) , ಸತೀಶ್‌ (49), ಉದಯ ಭಿಡೆ,(63) , ಪ್ರಕಾಶ್‌ (50) ಅನಂತ, (65), ಸೀತಾರಾಮ ( 63) ,ವೆಂಕಟರಮಣ ( 69) ,ದಿನೇಶ್‌ ( 68) ಎಂಬವರನ್ನು ಬಂಧಿಸಿದ್ದಾರೆ .

ಅವರು ಇಸ್ಪೀಟ್ ಜುಗಾರಿ ಆಟಕ್ಕೆ ಬಳಸಿದ ನಗದು ಹಣ 11.085/- ರೂ ಇಸ್ಪೀಟ್ ಎಲೆಗಳು -52 ಟಾರ್ಪಲ್ -1 ಹಾಗು ಬಿಳಿ ಬಣ್ಣದ ಪಂಚೆ -1 ಇವುಗಳನ್ನು ಸ್ವಾದೀನ ಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ  ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ  ಕಲಂ 87, ಕರ್ನಾಟಕ ಪೊಲೀಸ್ ಕಾಯ್ದೆ ಯಂತೆ ಪ್ರಕರಣ ದಾಖಲಾಗಿದೆ.

error: No Copying!