
ಉಡುಪಿ: ದಿನಾಂಕ 25-04-2023(ಹಾಯ್ ಉಡುಪಿ ನ್ಯೂಸ್) ಮಹಿಳೆಯೋರ್ವರು ತನ್ನ ಫೋಟೋವನ್ನು ನಾಗವಲ್ಲಿ ವೀಡಿಯೋ ವೊಂದಕ್ಕೆ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟು ತೊಂದರೆ ಉಂಟು ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಆರತಿ ಗಿಳಿಯಾರ್ ಎಂಬವರು ಪತ್ರಕರ್ತೆಯಾಗಿದ್ದು, ಸುಮಾರು 15 ದಿನಗಳ ಹಿಂದೆ ಅವರ ಫೋಟೋವನ್ನು ಎಡಿಟ್ ಮಾಡಿ ನಾಗವಲ್ಲಿ ವಿಡಿಯೋವೊಂದಕ್ಕೆ ಶೇಖರ ಹಾವಂಜೆ, ರಾಜು ಎಂ.ಎನ್ , ವಿಜಯ ಬಾರ್ಕೂರು, ಸೃಜಿತ್, ಜಯಕರ ನಾಯ್ಕ, ವಿ. ಗೋಪಾಲ ಶೆಟ್ಟಿ ಎಂಬವರು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪ್ರಸರಿಸಿ ತೊಂದರೆ ನೀಡಿದ್ದಾರೆ ಎಂದು ಆರತಿ ಗಿಳಿಯಾರ್ ರವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ಕಲಂ: 66(C), 67 ಐ.ಟಿ ಆಕ್ಟ್ನಂತೆ ಪ್ರಕರಣ ದಾಖಲಾಗಿದೆ.