IMG-20251107-WA0003.jpg
Spread the love

ಐಚಕ್ಕುಲಿ, ನಿಪ್ಪಟ್ಟು, ಕೋಡುಬಳೆ, ಸಂಡಿಗೆಗಳೇ,

ಕಡುಬು, ಹೋಳಿಗೆ, ಕಜ್ಜಾಯ, ಕರ್ಜಿಕಾಯಿಗಳೇ,

ಬೆಣ್ಣೆ, ತುಪ್ಪ, ಹಾಲು, ಮೊಸರುಗಳೇ,

ಮುದ್ದೆ, ರೊಟ್ಟಿ, ಚಪಾತಿ, ಪೀಜಾ, ಬರ್ಗರ್ ಗಳೇ,

ಚಿಕನ್, ಮಟನ್, ಫಿಶ್, ಪೋರ್ಕ್, ಭೀಫ್ ಗಳೇ,

ಸೀರೆ, ಲಂಗ, ಬುರ್ಖಾ, ಜೀನ್ಸ್, ಚೂಡಿದಾರ್ ಗಳೇ,

ಪ್ಯಾಂಟ್, ಷರ್ಟ್, ಪಂಚೆ, ಲುಂಗಿ, ಪೈಜಾಮಾಗಳೇ,

ಹರಿಶಿನ, ಕುಂಕುಮ, ವಿಭೂತಿ, ಧೂಪ, ಪರ್ ಪ್ಯೂಮ್ ಗಳೇ,

ರೋಜಾ, ಮಲ್ಲಿಗೆ, ಸಂಪಿಗೆ, ಸೇವಂತಿಗೆ, ಕಾಕಡಾಗಳೇ,

ಒಂದು ಜಡೆ, ಎರಡು ಜಡೆ, ಬಾಬ್ ಕಟ್, ಹೇರ್ ಕಟ್ ಗಳೇ,

ಗೌಡ, ಲಿಂಗಾಯತ, ದಲಿತ, ಬ್ರಾಹ್ಮಣ, ಕುರುಬ, ಹಿಂದುಳಿದ ವರ್ಗಗಳೇ,

ಶಿಯಾ, ಸುನ್ನಿ, ಕ್ಯಾಥೋಲಿಕ್, ಪ್ರಾಟೆಸ್ಟೆಂಟ್, ತೇರವಾದ, ಮಹಾಯಾನ, ದಿಗಂಬರ, ಶ್ವೇತಂಬರ, ಅಕಾಲಿ, ಖಾಲ್ಸಾ, ಪಾರ್ಸಿ, ಯಹೂದಿಗಳೇ,

ಕರಿಯ, ಬಿಳಿಯ, ಕೆಂಚ, ಗೋದಿ ಮೈ ಬಣ್ಣಗಳೇ,

ಶಿವ, ಜೀಸಸ್, ಪೈಗಂಬರ್, ಗುರುನಾನಕ್, ಬುದ್ದ, ಮಾಹಾವೀರರುಗಳೇ,

ರಾಮ, ಇಮ್ರಾನ್, ಜೇಕಬ್, ಸರ್ದಾರ್, ಪಠಾಣ್, ಠಾಕೂರ್ ಗಳೇ,

ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು, ಸಂಸ್ಕೃತಗಳೇ,

ಕಣ್ಣು, ಕಿವಿ, ಮೂಗು, ಬಾಯಿ, ಕಿಡ್ನಿ, ಹೃದಯಗಳೇ,

ಬಿಪಿ, ಶುಗರ್, ಕ್ಯಾನ್ಸರ್, ಏಡ್ಸ್, ಕೊರೋನಾ ವೈರಸ್ ಗಳೇ,

ಡಾಕ್ಟರ್, ಆಕ್ಟರ್, ಬೆಗ್ಗರ್, ಮಿನಿಸ್ಟರ್, ರಾಬರ್ಸಗಳೇ,

ಅಪ್ಪ, ಅಮ್ಮ, ಅಣ್ಷ, ತಮ್ಮ, ತಂಗಿ, ಬಂಧುಗಳೇ,……………

ಪ್ರಕೃತಿಯಲ್ಲಿ ಎಲ್ಲಾ ಒಂದೇ ಕಣ್ರಯ್ಯಾ,

ಇಲ್ಲಿ ಯಾವುದೂ ಸೃಷ್ಟಿಸಲು ಸಾಧ್ಯವಿಲ್ರಯ್ಯ,
ಯಾವುದೂ ನಾಶ ಮಾಡಲು ಸಾಧ್ಯವಿಲ್ರಯ್ಯ,

ರೂಪ, ಆಕಾರ, ಗುಣಗಳು ಮಾತ್ರ ಬೇರೆ ಬೇರೆಯಾಗಿರುತ್ತದ್ರಯ್ಯ,

ತಾರತಮ್ಯ ಎಲ್ಲಾ ನಿಮ್ಮ ಭ್ರಮೆಯಯ್ಯ,

ಇಷ್ಟು ಸರಳ ವಿಷಯ ಅರ್ಥವಾಗಲು ಸಹಸ್ರಾರು ವರ್ಷ ಬೇಕೇನ್ರಯ್ಯ,

ಆದರೂ ನಾವು ಹೇಳಿಕೊಳ್ಳುತ್ತೇವೆ,

ಮಾನವ ಮುಂದುವರಿದ ನಾಗರೀಕ ಸಮಾಜದ,
ಅತ್ಯಂತ ಬುದ್ಧಿವಂತ ಪ್ರಾಣಿಯೆಂದು,

ಇದು ನಿಜವೇ ? ನನಗೇಕೊ ಅನುಮಾನ.!! ನಿಮಗೆ ?……………….

ಎಲ್ಲೋ ಎಡವುತ್ತಿದ್ದೇವೆಯೇ ನಾವು ?

ಬಹುಶಃ,
ಯಾವುದೋ ಸಿದ್ಧಾಂತಗಳಿಗೆ ದಾಸರಾಗುತ್ತಿದ್ದೇವೆಯೇ ?
ಅಥವಾ,
ಬದಲಾವಣೆಗಳನ್ನು ತಪ್ಪಾಗಿ ಗ್ರಹಿಸುತ್ತಿದ್ದೇವೆಯೇ ?
ಅಥವಾ,
ತಾಂತ್ರಿಕ ಪ್ರಗತಿಯಿಂದ ಗೊಂದಲಕ್ಕೊಳಗಾಗುತ್ತಿದ್ದೇವೆಯೇ ?
ಅಥವಾ,
ಬದುಕಿನ ಅರ್ಥವೇ ಬದಲಾಗುತ್ತಿದೆಯೇ ?
ಅಥವಾ,
ನಾವೇ ಭ್ರಮೆಗೊಳಗಾಗುತ್ತಿದ್ದೇವೆಯೇ ?
ಅಥವಾ,
ಅಭಿವೃದ್ಧಿ ಎಂದರೆ ಏನೆಂದೇ ತಿಳಿಯುತ್ತಿಲ್ಲವೇ ?
ಅಥವಾ,
ಎಲ್ಲೋ ಕಳೆದುಹೋದ ಅನುಭವವಾಗುತ್ತಿದೆಯೇ ?
ಅಥವಾ,
ನಿಜಕ್ಕೂ ಒಳ್ಳೆಯ ಮಾರ್ಗದಲ್ಲಿ ಸಾಗುತ್ತಿದ್ದೇವೆಯೇ ?
ಅಥವಾ,
ಇದೇ ಬದುಕಿನ ಸಹಜ ಕ್ರಮವೇ ?
ಅಥವಾ,
ಎಲ್ಲಾ ಕಾಲಘಟ್ಟಗಳಲ್ಲೂ ಈ ತಳಮಳ ಇದ್ದದ್ದೆಯೇ ?
ಅಥವಾ,
ಸತ್ಯದ ಹುಡುಕಾಟವೇ ಅಂತಿಮ ಧ್ಯೆಯವೇ ?
ಅಥವಾ,
ಇದೆಲ್ಲವನ್ನು ಮೀರಿದ ಇನ್ನೇನಾದರೂ ಇದೆಯೇ ?

ಕಾಡುತ್ತಲೇ ಇರುವ ಗೊಂದಲದ ಕಾಡಿನಲಿ,

ಅಲೆಯುತ್ತಲೇ ಇರುವ ಮನದ ಸಾಗರದಲಿ,

ಉತ್ತರ ಹುಡುಕಿಕೊಳ್ಳಲು ಪ್ರಯತ್ನಿಸಿದರೆ,
ಬದುಕು ಒಂದಷ್ಟು ಸಹನೀಯವಾಗಬಹುದು,
ಜೀವನಮಟ್ಟ ಸುಧಾರಿಸಬಹುದು,
ಕ್ರಿಯಾತ್ಮಕ ಸಾಧನೆಗಳು ಸಾಧ್ಯವಾಗಬಹುದು,
ಆ ದಿನಗಳ ನಿರೀಕ್ಷೆಯಲ್ಲಿ ………………….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.

error: No Copying!