images-5.jpeg
Spread the love

ಮಣಿಪಾಲ: ದಿನಾಂಕ 06/10/2025 (ಹಾಯ್ ಉಡುಪಿ ನ್ಯೂಸ್) ರಾಜೀವ ನಗರದ ಸಾರ್ವಜನಿಕ ಮೈದಾನದಲ್ಲಿ ಅಂದರ್ ಬಾಹರ್ ಜುಗಾರಿ ಆಡುತ್ತಿದ್ದ ನಾಲ್ವರನ್ನು ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಅನೀಲ್‌ ಕುಮಾರ್‌ ಬಿ ಎಂ ಅವರು ಬಂಧಿಸಿದ್ದಾರೆ.

ಮಣಿಪಾಲ ಪೊಲೀಸ್ ಠಾಣೆ ಪೊಲೀಸ್ ಉಪನಿರೀಕ್ಷಕರಾದ ಅನೀಲ್ ಕುಮಾರ್ ಬಿ ಎಂ ಅವರಿಗೆ ದಿನಾಂಕ : 05-10-2025 ರಂದು ಉಡುಪಿ ತಾಲೂಕು 80 ಬಡಗುಬೆಟ್ಟು ಗ್ರಾಮದ ರಾಜೀವ ನಗರದ ಬಸ್ಸ್‌ ನಿಲ್ದಾಣದ ಹತ್ತಿರ ಇರುವ ನೀರಿನ ಟ್ಯಾಂಕಿನ ಕೆಳಗೆ ಇರುವ ಸಾರ್ವಜನಿಕ ಮೈದಾನದಲ್ಲಿ ಕೆಲವು ಜನರು ಹಣವನ್ನು ಪಣವನ್ನಾಗಿಟ್ಟು ಅಂದರ್‌ ಬಾಹರ್‌ ಇಸ್ಪೀಟ್‌ ಜುಗಾರಿ ಆಟ ಆಡುತ್ತಿದ್ದಾರೆ ಎಂದು ಸಾರ್ವಜನಿಕರಿಂದ ಮಾಹಿತಿ ಬಂದ ಮೇರೆಗೆ ಕೂಡಲೇ ದಾಳಿ ನಡೆಸಿ 1.ಜಯಂತ್‌ (37), ಹಳ್ಳಿಹೊಳೆ ಗ್ರಾಮ ಕುಂದಾಪುರ, 2.ಶರಣಪ್ಪ(45), 80 ಬಡಗುಬೆಟ್ಟು ಗ್ರಾಮ ಉಡುಪಿ, 3.ಈಶ (36), 80 ಬಡಗುಬೆಟ್ಟು ಗ್ರಾಮ ಉಡುಪಿ, 4.ಹಾಲೇಶ (35), 80 ಬಡಗುಬೆಟ್ಟು ಗ್ರಾಮ ಉಡುಪಿ ಇವರನ್ನು ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ .

ಆರೋಪಿಗಳು ಇಸ್ಪೀಟು ಜುಗಾರಿ ಆಟಕ್ಕೆ ಉಪಯೋಗಿಸಿದ 2,100/- ರೂಪಾಯಿ ನಗದು ಹಾಗೂ ಇಸ್ಪೀಟು ಎಲೆಗಳು, ಹಳೆಯ ದಿನಪತ್ರಿಕೆಯನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ  ಕಲಂ: 87 KP Act ರಂತೆ ಪ್ರಕರಣ ದಾಖಲಾಗಿದೆ.

error: No Copying!