
ಉಡುಪಿ: ದಿನಾಂಕ:17-07-2025(ಹಾಯ್ ಉಡುಪಿ ನ್ಯೂಸ್) ಕುಂಬಳಕಾಯಿ ಯಾರು ಕದ್ದಿದ್ದಾರೆ ಎಂಬುದಕ್ಕೆ ಒಬ್ಬ ತನ್ನ ಹೆಗಲನ್ನು ಮುಟ್ಟಿಕೊಂಡಿದ್ದಾನೆ ಎಂಬ ಗಾದೆ ಮಾತಿನಂತೆ ಮಾಜಿ ಸಚಿವ ಸುನಿಲ್ ಕುಮಾರ್ ರವರ ಪರಿಸ್ಥಿತಿಯಾಗಿದೆ ಎಂದು ಸುರೇಶ್ ಶೆಟ್ಟಿ ಬನ್ನಂಜೆ ಹೇಳಿದ್ದಾರೆ.
ಕಾರ್ಕಳದ ಉಮಿಕಲ್ ಬೆಟ್ಟದಲ್ಲಿ ಪ್ರತಿಷ್ಠಾಪಿಸಿದ ಪರಶುರಾಮನ ಮೂರ್ತಿಯು ಕಂಚಿನದು ಅಲ್ಲ ನಕಲಿ ಎಂಬುದು ಎಲ್ಲರಿಗೂ ತಿಳಿದ ವಿಷಯ .ನಕಲಿ ಮೂರ್ತಿಯ ಸೃಷ್ಟಿಕರ್ತರೆ ಇದುವರೆಗೂ ತಾವು ಮಾಡಿದ್ದೆ ಸರಿ ಎಂಬಂತೆ ಹೇಳಿಕೆಯನ್ನು ನೀಡಿರುತ್ತಾರೆ. ಆದರೆ ತನಿಕೆಯಲ್ಲಿ ಅದು ಕಂಚಿನ ಮೂರ್ತಿಯಲ್ಲ ಎಂಬುದು ಸಾಬೀತಾಗಿರುತ್ತದೆ
ಅಂದರೆ ಇವರು ನಮಗೆ ಮೋಸ ಮಾಡಿದ್ದು ಇದು ಜಗಜ್ಜಾ ಹಿರವಾಗಿದೆ .
ಅದನ್ನು ಪುನಃ ಮರೆಮಾಚಲು ಇದರ ವಿರುದ್ಧ ಯಾರು ಮಾತನಾಡುತ್ತಾರೆ ಅವರ ವಿರುದ್ಧ ಕೇಸು ದಾಖಲಿಸಬೇಕು ಎಂದು ಬಿಜೆಪಿಯವರು ಮನವಿ ಮಾಡಿರುತ್ತಾರೆ .ಇದು ದೊಡ್ಡ ಜೋಕ್. ಡೋಂಗಿ ಮಾಡುವುದು ಜನರಿಗೆ ಮೋಸ ಮಾಡುವುದು ನಂತರದ ದಿನಗಳಲ್ಲಿ ಕೋರ್ಟಿಗೆ ಪೊಲೀಸ್ ಸ್ಟೇಷನ್ ಗೆ ಹಾಗೂ ತಹಸಿಲ್ದಾರ್ ಕಚೇರಿಗೆ ಭೇಟಿ ನೀಡಿ ನಮ್ಮ ವಿರುದ್ಧ ಯಾರು ಹೇಳಿಕೆ ನೀಡುತ್ತಾರೆ ಅವರ ಮೇಲೆ ಕೇಸು ದಾಖಲಿಸಿ ಎಂದು ದೌರ್ಜನ್ಯ ನಡೆಸುವುದು ಎಲ್ಲ ಬಿಜೆಪಿ ನಾಯಕರಿಗೆ ಚಾಳಿ ಯಾಗಿ ಹೋಗಿದೆ .ನಮ್ಮ ಜಿಲ್ಲಾಧಿಕಾರಿಯವರು ಇದನ್ನು ಯಾವುದನ್ನು ಲೆಕ್ಕಿಸದೆ ಸೂಕ್ತವಾದ ನ್ಯಾಯವನ್ನು ಉಡುಪಿ ಜಿಲ್ಲೆಯ ಜನತೆಗೆ ತಿಳಿಸಬೇಕಾಗಿದೆ.
ಮೂರ್ತಿ ಕಂಚಿನದು ಅಲ್ಲ ಎಂದು ಸಾಬೀತಾಗಿರುವಾಗ ಈ ಬಿಜೆಪಿಯ ಯಾವ ನಾಯಕರಿಗೂ ಅದರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ . ಇದು ಪರಶುರಾಮನ ಹೆಸರಿನಲ್ಲಿ ಉಡುಪಿಯ ಜಿಲ್ಲೆಯ ಜನತೆಗೆ ಮಾಡಿದ ಮೋಸ
ಹಾಗೂ ಲೂಟಿ. ಎಂದು ಸಾಬೀತಾಗಿದೆ .ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಇದರ ಅಧ್ಯಕ್ಷರು ಉಡುಪಿ ನಗರಸಭೆಯ ಸದಸ್ಯರಾದ ಶ್ರೀ ಸುರೇಶ್ ಶೆಟ್ಟಿ ಬನ್ನಂಜೆ ಈ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿರುತ್ತಾರೆ.