Spread the love

ಕುಂದಾಪುರ: ದಿನಾಂಕ :18-06-2025(ಹಾಯ್ ಉಡುಪಿ ನ್ಯೂಸ್) ಉತ್ತರ ಕರ್ನಾಟಕದಲ್ಲಿ ಕೇಬಲ್ ನೆಟ್ ವರ್ಕ್ ಸೇವೆಯನ್ನು ನೀಡುತ್ತಿರುವವರಿಗೆ ಇನ್ನೊಂದು ಕೇಬಲ್ ನೆಟ್ವರ್ಕ್ ನವರು ಜೀವ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಕುಂದಾಪುರ ತಾಲೂಕು,ಕರ್ಕುಂಜೆ ಗ್ರಾಮದ ನೇರಳಕಟ್ಟೆಯಲ್ಲಿ ವಾಸವಾಗಿರುವ ಈಶ್ವರ (30) ಎಂಬವರು ನೇರಳಕಟ್ಟೆ ,ಉಪ್ಪುಂದ ಮತ್ತು ಉತ್ತರ ಕನ್ನಡದ ಮುರ್ಡೇಶ್ವರದಲ್ಲಿ ಮಲೆನಾಡು ಕೇಬಲ್ ನೆಟ್ ವರ್ಕ್ ರವರ ಅಡಿಯಲ್ಲಿ ಕೇಬಲ್ ಟಿ.ವಿ ಮತ್ತು ಇಂಟರ್ ನೆಟ್ ಸರ್ವಿಸ್ ಒದಗಿಸುವ ಸೇವೆಯನ್ನು ನೀಡುತ್ತಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಇವರು ಮೊದಲು  ಡೆನ್ ಮತ್ತು ಫಾಸ್ಟ್ ನೆಟ್ ಹೆಸರಿನ ಕೇಬಲ್ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿದ್ದು, ಈಶ್ವರ ಅವರು ಸ್ವಂತ ನೆಟ್ ವರ್ಕ್ ಸರ್ವಿಸ್ ಪ್ರಾರಂಭಿಸಿದ ನಂತರ, ಡೆನ್ ಮತ್ತು ಫಾಸ್ಟ್ ನೆಟ್ ನವರು ಹಲವು ಬಾರಿ ಈಶ್ವರ ರವರಿಗೆ ಕೇಬಲ್ ನೆಟ್ ವರ್ಕ್ ವ್ಯವಹಾರವನ್ನು ನಿಲ್ಲಿಸುವಂತೆ ಬೆದರಿಕೆ ಒಡ್ಡಿದ್ದು ಆಲ್ಲದೇ ನೆಟ್ ವರ್ಕ್ ಸರ್ವೀಸ್ ಕೇಬಲ್‌ಗಳನ್ನು ತುಂಡರಿಸಿ ನಷ್ಟ ಉಂಟುಮಾಡಿ ತೊಂದರೆ ನೀಡಿದ್ದು ಅಲ್ಲದೇ ಹಲವು ಬಾರಿ ಅವರ ಮೊಬೈಲ್ ಫೋನ್ ನಿಂದ ಕರೆಮಾಡಿ ಅವಾಚ್ಯ ಶಬ್ದಗಳಿಂದ ಬೈದು ನಿನ್ನನ್ನು ಕೊಲ್ಲುವುದಾಗಿ ಬೆದರಿಕೆ ಒಡ್ಡಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

  ಈಶ್ವರ ರವರು ತನ್ನ ಕರ್ತವ್ಯದ ಬಗ್ಗೆ ಕೇಬಲ್ ನೆಟ್ ವರ್ಕ್ ಜಾಲ ಇರುವ ಸ್ಥಳಗಳಿಗೆ ಆಗಾಗೆ ಸೇವೆಯ ಬಗ್ಗೆ ಒಬ್ಬಂಟಿಗನಾಗಿ ಬೇಟಿ ನೀಡಬೇಕಾಗಿರುವುದರಿಂದ ಯಾವ ಸಮಯದಲ್ಲಿಯೂ ಸಹಚರರಿಂದ ಆಕ್ರಮಣಮಾಡಿ ಕೊಲೆಮಾಡುವ ಸಾಧ್ಯತೆ ಇರುತ್ತದೆ. ಹಾಗೂ ಹಲವು ಬಾರಿ ಕರೆಮಾಡಿ, ಪೊಲೀಸರಿಗೆ ದೂರು ನೀಡಿದರೆ ಆ ದಿನದಿಂದ ಆರು ತಿಂಗಳ ಒಳಗೆ ನಿನ್ನನ್ನು ಕೊಲೆಮಾಡುವುದಾಗಿ ನಿಖರವಾಗಿ ಬೆದರಿಕೆ ಹಾಕಿದ್ದು ಅಲ್ಲದೇ ಈಶ್ವರರವರ ತಂದೆ ತಾಯಿಯವರಿಗೂ ಜೀವಕ್ಕೂ ಸಹ ಅಪಾಯ ಒಡ್ಡುವ ಸಂದರ್ಭ ಇದ್ದು  ಈಶ್ವರ ಮತ್ತು ಅವರ ತಂದೆ ತಾಯಿಯ ಜೀವಕ್ಕೆ ಏನಾದರೂ ಅಪಾಯವಾದಲ್ಲಿ ಅದಕ್ಕೆ ಬೆದರಿಕೆ ಹಾಕಿರುವವರು ಮತ್ತು  ಅವರ ಸಹಚರರೇ ಕಾರಣವಾಗಿರುತ್ತಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ: 352, 351 (2), 324 (4) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!