Spread the love

ದಿನಾಂಕ:13-06-2025(ಹಾಯ್ ಉಡುಪಿ ನ್ಯೂಸ್) ಶಂಕರನಾರಾಯಣ: ದಿನಾಂಕ 12/06/2025 ರಂದು ಆರೋಪಿಗಳಾದ 1) ಸುಬ್ರಹ್ಮಣ್, 2) ಅಶ್ರಫ್ , 3) ಸುನೀಲ್ , 4) ಧೀರಜ್ , 5) ಶಂಕರ , 6) ಸುಧೀರ್ ಕುಮಾರ, 7) ಮಧುಕರ, 8) ಮನೋಹರ , 9) ಗಣೇಶ, 10) ರಾಮ ಎಂಬವರು ಕುಂದಾಪುರ ತಾಲೂಕು ಸಿದ್ದಾಪುರ ಗ್ರಾಮದ ಮಂಜುನಾಥ ಕಾಂಪ್ಲೆಕ್ಸ್ ಕಟ್ಟಡದ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ  ಹಣವನ್ನು ಪಣವಾಗಿರಿಸಿ ಅಂದರ್ ಬಾಹರ್ ಇಸ್ಪೀಟ್‌ ಜೂಜಾಟ ಆಟ ಅಡುತ್ತಿದ್ದ ಸಮಯ ಮಾಹಿತಿ ಮೇರೆಗೆ ಶಂಕರನಾರಾಯಣ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಶಂಭುಲಿಂಗಯ್ಯ ಎಮ್.ಇ ಅವರು  ಸಿಬ್ಬಂದಿಗಳೊಂದಿಗೆ ಕೂಡಲೇ ದಾಳಿ ನಡೆಸಿ ಅಲ್ಲಿ ಅಂದರ್ ಬಾಹರ್ ಜುಗಾರಿ ಆಡುತ್ತಿದ್ದ ಹತ್ತು ಜನರನ್ನು ಬಂಧಿಸಿದ್ದಾರೆ.

ಆರೋಪಿಗಳು ಅಂದರ್ – ಬಾಹರ್ ಜುಗಾರಿ ಆಟಕ್ಕೆ ಬಳಸಿದ ನಗದು ಹಣ 8,810/- ರೂಪಾಯಿ, 10 ಮೊಬೈಲ್ ಪೋನ್ ಗಳು, ಇಸ್ಪೀಟ್ ಜೂಜಾಟ ಆಡಲು ಬಂದಿದ್ದ KA-20-EH-1107 HERO ಕಂಪನಿಯ ಮೋಟಾರು ಸೈಕಲ್, KA-19-EM-6793 HERO SPLENDER ಮೋಟಾರು ಸೈಕಲ್ , KA-20-EL-3575 YAMAHA ಕಂಪನಿಯ ಮೋಟಾರು ಸೈಕಲ್,ಇಸ್ಪೀಟ್ ಎಲೆಗಳು, ಪ್ಲಾಸ್ಟೀಕ್ ಕುರ್ಚಿಗಳು, ಒಂದು ಪ್ಲಾಸ್ಟೀಕ್ ಟೇಬಲ್ , ಕಪ್ಪು ಮತ್ತು ಕೇಸರಿ ಬಣ್ಣ ಮಿಶ್ರಿತ -ಬಟ್ಟೆ ಹಾಗೂ ಒಂದು ಮೇಣದ ಬತ್ತಿಯನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ  ಕಲಂ: 112 ಬಿ ಎನ್ ಎಸ್ & ಕಲಂ: 87 ಕರ್ನಾಟಕ ಪೊಲೀಸ್ ಕಾಯ್ದೆ ಯಂತೆ ಪ್ರಕರಣ ದಾಖಲಾಗಿದೆ.

error: No Copying!