
ಉಡುಪಿ: ದಿನಾಂಕ:10-06-2025( ಹಾಯ್ ಉಡುಪಿ ನ್ಯೂಸ್) ನಗರದ ಸಿಟಿ ಬಸ್ ನಿಲ್ದಾಣದಲ್ಲಿ ಹಾಗೂ ಕರಾವಳಿ ಜಂಕ್ಷನ್ ನ ಶಾರದಾ ಹೋಟೆಲ್ ಬೈಪಾಸ್ ಬದಿಯಲ್ಲಿ ರಾತ್ರಿ ಹೊತ್ತು ನಡೆಯುತ್ತಿದ್ದ ಬಹಿರಂಗ ವೇಶ್ಯಾವಾಟಿಕೆಯಿಂದಾಗಿ ಧಾರ್ಮಿಕ ನಗರಿ ಉಡುಪಿಯ ಮಾನ ಹರಾಜು ಆಗುತ್ತಿದೆ ಎಂದು ಹಾಯ್ ಉಡುಪಿ ಮಾಧ್ಯಮ ಈ ಹಿಂದೆ ವರದಿ ಪ್ರಕಟಿಸುವ ಮೂಲಕ ಆಗಿನ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕುಮಾರ್ ಅವರನ್ನು ಎಚ್ಚರಿಸಿತ್ತು.
ಆ ನಂತರ ಎಸ್ಪಿ ಅರುಣ್ ಕುಮಾರ್ ಅವರು ಸಿಟಿ ಬಸ್ ನಿಲ್ದಾಣದಲ್ಲಿ ಹಾಗೂ ಶಾರದಾ ಹೋಟೆಲ್ ಬೈಪಾಸ್ ರಸ್ತೆ ಬದಿಯಲ್ಲಿ ವೈಶ್ಯಾವಾಟಿಕೆ ನಡೆಸುತ್ತಿದ್ದವರ ಮೇಲೆ ಲಾಠಿ ಬೀಸುವ ಮೂಲಕ ಉಡುಪಿಗೆ ಶಾಪದಂತಿದ್ದ ಈ ಬಹಿರಂಗ ವೇಶ್ಯಾವಾಟಿಕೆಗೆ ಪೂರ್ಣ ವಿರಾಮ ಹಾಕುವ ಮೂಲಕ ದಕ್ಷ ಪೊಲೀಸ್ ಅಧಿಕಾರಿ ಎಂದು ಸಾಬೀತು ಪಡಿಸಿದ್ದರು.
ಇದೀಗ ಎಸ್ಪಿ ಅರುಣ್ ಕುಮಾರ್ ಅವರು ವರ್ಗಾವಣೆ ಆಗುತ್ತಿದ್ದಂತೆ ಸಿಟಿ ಬಸ್ ನಿಲ್ದಾಣದಲ್ಲಿ ವೇಶ್ಯಾವಾಟಿಕೆ ಎಗ್ಗಿಲ್ಲದೆ ಪ್ರಾರಂಭವಾಗಿದೆ. ಪೊಲೀಸ್ ಇಲಾಖೆಯ ದ್ರಷ್ಟಿ ಗೆ !ಬೀಳದಿದ್ದರೂ? ಸಾರ್ವಜನಿಕರ ಕಣ್ಣಿಗೆ ಕಾಣುತ್ತಿರುವ ಈ ಬಹಿರಂಗ ವೇಶ್ಯಾವಾಟಿಕೆ ದಂಧೆಯಿಂದಾಗಿ ಮಹಿಳೆಯರು ತಲೆ ತಗ್ಗಿಸಿ ನಡೆಯುವಂತಹ ಸ್ಥಿತಿ ಮರು ನಿರ್ಮಾಣವಾಗಿದೆ.
ಉಡುಪಿ ಜಿಲ್ಲೆಯ ನೂತನ ಎಸ್ಪಿ ಹರಿರಾಂ ಶಂಕರ್ ಅವರು ಈ ಬಹಿರಂಗ ವೇಶ್ಯಾವಾಟಿಕೆಯನ್ನು ತಡೆಯಲು ಶಕ್ತರಾಗುವರೋ? ಎಂಬುದು ಸಾರ್ವಜನಿಕರ ಪ್ರಶ್ನೆ?