
RCB ಸಂಭ್ರಮಾಚರಣೆಯ ಕಾಲ್ತುಳಿತದಲ್ಲಾದ ಸಾವು ನೋವುಗಳ ಪ್ರಕರಣ ಸಂಬಂಧ ಕಾಂಗ್ರೆಸ್ ಹೈಕಮಾಂಡ್ ಅತೀ ತುರ್ತಾಗಿ ಮದ್ಯಪ್ರವೇಶಿಸಬೇಕು.
ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿಕೆಶಿ, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸಹಿತ ರಾಜ್ಯ ಸಚಿವ ಸಂಪುಟದಲ್ಲಿರುವ ಅದಕ್ಷ, ಬೇಜವಾಬ್ದಾರಿ ಸಚಿವರುಗಳನ್ನು ಕೈಬಿಟ್ಟು, ಶಾಸಕಾಂಗ ಪಕ್ಷದ ಸಭೆ ಕರೆದು ನೂತನ ನಾಯಕರನ್ನು ಆಯ್ಕೆ ಮಾಡಿ ಹೊಸದಾಗಿ ಸಚಿವ ಸಂಪುಟವನ್ನು ರಚಿಸುವ ಕೆಲಸಕ್ಕೆ ಕೂಡಲೇ ಚಾಲನೆ ನೀಡಬೇಕು.
ಒಂದು ರಾಷ್ಟ್ರೀಯ ಪಕ್ಷವಾಗಿ ಒಬ್ಬರಿಗೋ, ಇಬ್ಬರಿಗೋ ಪಕ್ಷ ಜೋತುಬೀಳುವ ಅಗತ್ಯವಿಲ್ಲ. ಸಿಎಂ ಆಗಲು, ಡಿಸಿಎಂ ಆಗಲು, ಮಂತ್ರಿಗಳಾಗಲು ಅರ್ಹತೆ ಯೋಗ್ಯತೆ ಇರುವ ಹಲವರು ಕಾಂಗ್ರೆಸ್ ಪಕ್ಷದಲ್ಲಿರುವುದರಿಂದ, ಹೈಕಮಾಂಡ್ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗುವುದು ಸರಿಯಾದ ಕ್ರಮವಾಗುತ್ತದೆ.
ಸ್ವತಹ ಸಿಎಂ, ಡಿಸಿಎಂ ಅವರೇ ಸಂಭ್ರಮಾಚರಣೆಯಲ್ಲಿ ಮುಖ್ಯ ಪಾತ್ರ ವಹಿಸಿರುವುದರಿಂದ ಕಾಲ್ತುಳಿತ ಪ್ರಕರಣದ ತನಿಖೆಯನ್ನು ಯಾರ ಯಾವ ಒತ್ತಡಕ್ಕೂ ಮಣಿಯದೆ ಹೈಕೋರ್ಟ್ ನ ಹಾಲಿ ನ್ಯಾಯಮೂರ್ತಿಗಳ ನೇರ ಉಸ್ತುವಾರಿಯಲ್ಲಿ ಎಸ್ ಐ ಟಿ ರಚಿಸಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವ ಕೆಲಸ ಆಗಬೇಕಾಗಿದೆ.
~ ಶ್ರೀರಾಮ ದಿವಾಣ
07/06/2025