Spread the love

ಹೆಬ್ರಿ: ದಿನಾಂಕ: 07-06-2025(ಹಾಯ್ ಉಡುಪಿ ನ್ಯೂಸ್) ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಸಿಬ್ಬಂದಿ ಸುಳ್ಳು ಮಾಹಿತಿ ನೀಡಿ ಹಣ ದುರ್ಬಳಕೆ ಮಾಡಿಕೊಂಡು ಸಂಘಕ್ಕೆ ಮೋಸ ಮಾಡಿದ್ದಾರೆ ಎಂದು ಹೆಬ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಹೆಬ್ರಿ ಗ್ರಾಮದ ನಿವಾಸಿ ಶೀನ ಎಂಬವರು ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘ (ನಿ) ಹೆಬ್ರಿ ಗ್ರಾಮ ಇದರ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿದ್ದು  ತಮ್ಮ ಬ್ಯಾಂಕಿನ ಸಿಬ್ಬಂದಿಯಾದ ಶಂಕರ ಎಂಬವರು  ಬ್ಯಾಂಕಿನ 88150/- ರೂಪಾಯಿ ಗಳನ್ನು ಸುಂದರ ಕುಲಾಲ ಎಂಬವರಿಗೆ ಕೂಲಿ ಬಾಬ್ತು ನೀಡಲಾಗಿದೆ ಎಂದು ಸುಳ್ಳು ಮಾಹಿತಿ ನೀಡಿ ಈ ಮೊತ್ತವನ್ನು ದುರ್ಬಳಕೆ ಮಾಡಿ ತಾನು ಕೆಲಸ ಮಾಡುವ ಸಂಘಕ್ಕೆ ಮೋಸ ಮತ್ತು ನಂಬಿಕೆ ದ್ರೋಹ ಮಾಡಿರುತ್ತಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 37/2025 US 409,420 ಐಪಿಸಿ ರಂತೆ ಪ್ರಕರಣ ದಾಖಲಾಗಿದೆ.

error: No Copying!