Spread the love

ದಿನಾಂಕ:03-06-2025(ಹಾಯ್ ಉಡುಪಿ ನ್ಯೂಸ್)

ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣದ ಜಿಲ್ಲಾಧ್ಯಕ್ಷರಾದ ಸುಜಯ ಪೂಜಾರಿ ಹಾಗೂ ಜಿಲ್ಲಾ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಗಳು ಉಡುಪಿ ಜಿಲ್ಲೆಯ ನೂತನ ವರಿಷ್ಠಾಧಿಕಾರಿಯವರಾದ ಹರಿ ರಾಂ ಶಂಕರ್ ರವರನ್ನು ಭೇಟಿಯಾಗಿ ಹೂ ಗುಚ್ಛ ನೀಡಿ ಗೌರವಿಸಿದರು.
ತದನಂತರ ಮಾತನಾಡಿದ ಉಡುಪಿ ಎಸ್ಪಿ ಹರಿ ರಾಂ ಶಂಕರ್ ಅವರು ಉಡುಪಿ ಜಿಲ್ಲೆಯ ಯಾವುದೇ ರೀತಿಯ ಸಾಮಾನ್ಯ ಜನರಿಗೆ ಯಾವುದೇ ಸಮಸ್ಯೆ ನೋವು ಉಂಟು ಆಗದಂತೆ ನೋಡಿಕೊಳ್ಳುವುದು ಮತ್ತು ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿ ನನ್ನ ಕೈಯಲ್ಲಿ ಎಷ್ಟು ಕಾರ್ಯವನ್ನು ಮಾಡಲು ಸಾಧ್ಯವೊ ಆ ಕಾರ್ಯವನ್ನು ನಾನು ಮಾಡುತ್ತೇನೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ್ ಪೂಜಾರಿ.ಜಿಲ್ಲಾ ಸಲಹೆಗಾರ ಪ್ರಕಾಶ್ ದೇವಾಡಿಗ,ಜಿಲ್ಲಾ ಸಂಘಟನಾ ಕಾರ್ಯದರ್ಶಿ ಗೋಪಾಲ್ ದೊರೆ, ಜಿಲ್ಲಾ ಸದಸ್ಯರಾದ ಗುರು ಶೆಟ್ಟಿ . ಬಸವರಾಜ್.ರಾಜು.ಪ್ರವೀಣ್. ಸದ್ದಾಂ ಅಕ್ಷಯ. ,ಧನುಷ್, ಸುಶಾಂತ್, ಕಾರ್ತಿಕ್, ವಿಶು .ಉಪಸ್ಥಿತರಿದ್ದರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: No Copying!