
ಕಾಪು: ದಿನಾಂಕ: 30-05-2025(ಹಾಯ್ ಉಡುಪಿ ನ್ಯೂಸ್) ಕಾಪು ಏಣಗುಡ್ಡೆ ನಿವಾಸಿ ಯೋರ್ವರು ಕಾಣೆಯಾಗಿದ್ದಾರೆ ಎಂದು ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಪು ಏಣಗುಡ್ಡೆ ನಿವಾಸಿ ವಿದ್ಯಾಧರ ಎಂಬವರ ತಂದೆ ಶೇಖರ (73)ರವರು ವಯೋವೃದ್ಧರಾಗಿದ್ದು ಮನೆಯಲ್ಲಿಯೇ ಇದ್ದು, ದಿನಾಲು ಬೆಳಿಗ್ಗೆ ಮತ್ತು ಸಂಜೆ ಕಟಪಾಡಿ ಪೇಟೆಗೆ ಹೋಗಿ ವಾಪಸ್ಸು ಮನೆಗೆ ಹೋಗುತ್ತಿದ್ದು, ಒಮ್ಮೊಮ್ಮೆ ಮನೆಯ ಬದಿಯಲ್ಲಿರುವ ಹೊಳೆಯಲ್ಲಿ ಮೀನು ಹಿಡಿಯಲು ಹೋಗುತ್ತಿದ್ದರು ಎಂದು ವಿದ್ಯಾಧರ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಇತ್ತೀಚೆಗೆ ಅವರಿಗೆ ಹರ್ನಿಯಾ ಖಾಯಿಲೆ ಕಾಣಿಸಿಕೊಂಡಿದ್ದು ಅವರನ್ನು ಉಡುಪಿಯ ಸಿಟಿ ಆಸ್ಪತ್ರೆಯಲ್ಲಿ ವೈದ್ಯರಿಂದ ತಪಾಸಣೆಗೆ ಒಳಪಸಿದ್ದು ವೈದ್ಯರ ಸಲಹೆಯಂತೆ ದಿನಾಂಕ 30/05/2025 ರಂದು ಸರ್ಜರಿಗೆ ಹೋಗಲು ನಿರ್ಧರಿಸಿದ್ದು, ಶೇಖರ ರವರು ದಿನಾಂಕ 29/05/2025 ರಂದು ಬೆಳಿಗ್ಗೆ 06:00 ಗಂಟೆಗೆ ಮನೆಯಿಂದ ಹೋದವರು ವಾಪಸ್ಸು ಮನೆಗೆ ಬಾರದೇ ಇದ್ದುದನ್ನು ತಿಳಿದು ಕಟಪಾಡಿ ಪೇಟೆ, ಹೊಳೆಯ ಬದಿ, ಉಡುಪಿ, ಸಂತೆಕಟ್ಟೆ, ಬಂಟಕಲ್ಲು, ಪಡುಬಿದ್ರಿ ಮುಂತಾದ ಕಡೆಗಳಲ್ಲಿ ಹುಡುಕಾಡಿ ಸಂಬಂಧಿಕರ ಹಾಗೂ ಪರಿಚಯಸ್ಥರ ಮನೆಯಲ್ಲಿ ವಿಚಾರಿಸಿದಲ್ಲಿ ಪತ್ತೆಯಾಗಿರುವುದಿಲ್ಲ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಕಲಂ:ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿದೆ.