Spread the love

ಬೆಂಗಳೂರು: ದಿನಾಂಕ:29-05-2025(ಹಾಯ್ ಉಡುಪಿ ನ್ಯೂಸ್) ಕನ್ನಡ ಭಾಷೆಯ ಬಗ್ಗೆ ಕೇವಲವಾಗಿ ಮಾತಾಡಿರುವ ಕಮಲಹಾಸನ್ ವಿರುದ್ಧ ಇಂದು ಕನ್ನಡ ಪರ ಸಂಘಟನೆಗಳು ಫಿಲ್ಮ್ ಚೇಂಬರ್ ಗೆ ಮುತ್ತಿಗೆ ಹಾಕಿ ಕಮಲಹಾಸನ್ ಚಿತ್ರ ಬಿಡುಗಡೆಗೆ ಅವಕಾಶ ನೀಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಫಿಲಂ ಚೇಂಬರ್ ಅಧ್ಯಕ್ಷ ಸಿ.ನರಸಿಂಹರಾಜು ಅವರು ಕಮಲಹಾಸನ್ ಅವರು ನಾಳೆಯ ಒಳಗೆ ಮಾಧ್ಯಮಗಳ ಮುಂದೆ ಕ್ಷಮೆ ಕೇಳದಿದ್ದರೆ ರಾಜ್ಯದಲ್ಲಿ ಅವರ ಥಗ್ ಲೈಫ್ ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದರು. ಫಿಲಂ ಚೇಂಬರ್ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ಮಾತನಾಡಿ ಕಮಲಹಾಸನ್ ರವರು ಇವತ್ತು ನಾಳೆ ಒಳಗೆ ಕ್ಷಮೆ ಯಾಚಿಸಬೇಕು ಎಂದರು.

error: No Copying!