Spread the love

ಕುಂದಾಪುರ: ದಿನಾಂಕ: 20/02/2025 (ಹಾಯ್ ಉಡುಪಿ ನ್ಯೂಸ್) ಕುಂಬ್ರಿ ಜಂಕ್ಷನ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ನಡೆಸುತ್ತಿದ್ದ ವ್ಯಕ್ತಿಯನ್ನು ಕುಂದಾಪುರ ಪೊಲೀಸ್‌ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ  ನಂಜಾ ನಾಯ್ಕ್ ಅವರು ಬಂಧಿಸಿದ್ದಾರೆ.

ಕುಂದಾಪುರ ಪೊಲೀಸ್‌ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ನಂಜಾ ನಾಯ್ಕ್ ಅವರಿಗೆ ದಿನಾಂಕ: 19-02-2025 ರಂದು ಕೋಟೇಶ್ವರ ಕುಂಬ್ರಿ ಜಂಕ್ಷನ್‌ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಡುತ್ತಿರುವುದಾಗಿ ಬಂದ  ಸಾರ್ವಜನಿಕ ಮಾಹಿತಿಯಂತೆ ಕೂಡಲೇ ಸ್ಥಳಕ್ಕೆ ಹೋಗಿ ಅಲ್ಲಿ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ವ್ಯಕ್ತಿಯನ್ನು ಹಿಡಿದು ವಿಚಾರಣೆ ನಡೆಸಿದಾಗ ಆತ ತನ್ನ ಹೆಸರು ಗೋವರ್ಧನ ಎಂದು ತಿಳಿಸಿದ್ದು ತನಗೆ ಮಟ್ಕಾ ಜುಗಾರಿ ಸಂಗ್ರಹಿಸಲು ಹಿತೇಶ ಎಂಬವ ತಿಳಿಸಿದ್ದು , ಮೊತ್ತವನ್ನು ಹಿತೇಶ ಪಡೆದುಕೊಂಡು ಹೋಗುತ್ತಿದ್ದು, ಅವನು ಈ ಹಣವನ್ನು ಮಟ್ಕಾ ಬುಕ್ಕಿ ಉಡುಪಿಯ ಲಿಯೋ ಕಾರ್ನೇಲಿಯೋ ಗೆ ನೀಡುತ್ತಿರುವುದಾಗಿಯೂ ಹಿತೇಶನಿಗೆ ಕಮಿಷನ್‌ ನೀಡುತ್ತಿರುವುದಾಗಿ ವಿಚಾರಣೆಯಲ್ಲಿ ತಿಳಿಸಿದ್ದಾನೆ ಎನ್ನಲಾಗಿದೆ.

ಆತನ ಬಳಿ ಇದ್ದ ಜುಗಾರಿ ಆಟಕ್ಕೆ ಸಂಬಂಧಿಸಿದ ನಗದು ರೂಪಾಯಿ 2,320/- ರೂಪಾಯಿ ಹಾಗೂ ಮಟ್ಕಾ ಸಂಖ್ಯೆ ಬರೆದ ಚೀಟಿ, ಮಟ್ಕಾ ಬರೆಯಲು ಉಪಯೋಗಿಸಿದ ಬಾಲ್‌ಪೆನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ  ಕಲಂ: 112 ಜೊತೆಗೆ 3(5) BNS ಹಾಗೂ ಕಲಂ:78(1) 78(iii) KP ACT ರಂತೆ ಪ್ರಕರಣ ದಾಖಲಾಗಿದೆ.

error: No Copying!